ಕೋಲ್ಕತ್ತಾ, 02 ಜೂನ್ (ಹಿ.ಸ.) :
ಆ್ಯಂಕರ್ : ಜಮ್ಮು ಕಾಶ್ಮೀರದ ಪಹಲ್ಗಾಮ್ ದಾಳಿಗೆ ಮೊದಲು ಬಂಧಿತ ಐಎಸ್ಐ ಏಜೆಂಟ್ ಮತಿರಾಮ್ ಜಾಟ್ಗೆ ಕೋಲ್ಕತ್ತಾದ ಮೊಮಿನ್ಪುರದಲ್ಲಿರುವ ಅಂಗಡಿಯಿಂದ ₹22,000 ಕಳುಹಿಸಲಾಗಿತ್ತು ಎಂಬ ವಿಷಯ ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಅಂಗಡಿಯಿಂದ ಮತಿರಾಮ್ ಖಾತೆಗೆ ನಾಲ್ಕು ಬಾರಿ ಹಣ ಜಮಾ ಮಾಡಲಾಗಿದ್ದು, ಕೊನೆಯದಾಗಿ ಮಾರ್ಚ್ 25ರಂದು ಹಣ ವರ್ಗಾವಣೆ ನಡೆದಿದೆ. ಹಣವನ್ನು ಇ-ವ್ಯಾಲೆಟ್ ಮೂಲಕ ಕಳುಹಿಸಿದ್ದ ಮೊಹಮ್ಮದ್ ವಕೀಲ್ ಎಂಬ ಹೋಟೆಲ್ ಉದ್ಯೋಗಿ ಹಾಗೂ ಮಾಜಿ ಸೈನಿಕನನ್ನು ಎನ್ಐಎ ವಿಚಾರಣೆ ನಡೆಸಿದೆ.
ಹವಾಲಾ ಮೂಲಕ ಹಣ ಕಳುಹಿಸಲಾಗಿದೆ ಎಂಬ ಶಂಕೆಯಿದ್ದು, ಅಂಗಡಿ ಮಾಲೀಕರಿಗೆ ಸಮನ್ಸ್ ನೀಡಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದ್ದು, ಐಎಸ್ಐ ಬೆಂಬಲಿತ ಹಣಕಾಸು ಜಾಲದ ತನಿಖೆ ಮುಂದುವರಿದಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa