ಹಗರಿಬೊಮ್ಮನಹಳ್ಳಿ, 02 ಜೂನ್ (ಹಿ.ಸ.) :
ಆ್ಯಂಕರ್ : ಹಗರಿಬೊಮ್ಮನಹಳ್ಳಿಯ ಕೆಚ್ಚನಬಂಡಿ ಗ್ರಾಮದ ಬಳಿ ಸಕ್ಕರೆ ಕಾರ್ಖಾನೆ ಆರಂಭಿಸಲು ತ್ವರಿತವಾಗಿ ಪರವಾನಿಗೆ ನೀಡಲು ಆಗ್ರಹಿಸಿ ಕರ್ನಾಟಕ ರಾಜ್ಯರೈತ ಸಂಘದ ತಾಲೂಕು ಘಟಕ ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದೆ.
ರಾಜ್ಯ ರೈತಸಂಘದ ಸಂಘಟನಾ ಕಾರ್ಯದರ್ಶಿ ಬಿ. ಗೋಣಿಬಸಪ್ಪ ಅವರು, ಕೆಚ್ಚನಬಂಡಿ ಗ್ರಾಮದ ಬಳಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಕರ್ನಾಟಕ ಬಂಗಾರು ಶುಗರ್ ಪ್ರೈವೇಟ್ ಲಿಮಿಟೆಡ್ನವರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯನ್ನು ಕೂಡಲೇ ಪರಿಶೀಲಿಸಿ ಕಾರ್ಖಾನೆ ಸ್ಥಾಪಿಸಲು ಕಂಪನಿಯವರಿಗೆ ಅನುಮತಿ ನೀಡಬೇಕು ಎಂದು ಕೋರಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹರಟೆ ಕಾಳಪ್ಪ, ಕಾರ್ಯಾಧ್ಯಕ್ಷ ಎಚ್. ನಾಗರಾಜ, ರೈತ ಸಂಘಟನೆಯ ಗಡ್ಡಿ ನಿಂಗಪ್ಪ, ಗುಡ್ಲಾನೂರು ವಸಂತಕುಮಾರ, ಎನ್. ವೀರಣ್ಣ, ಎಚ್. ಶೇಖರಪ್ಪ, ಕೆ. ಶಿವಣ್ಣ, ಹೊಸಕೇರಪ್ಪನವರ ಹನುಮಂತಪ್ಪ ಇನ್ನಿತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್