ಬಳ್ಳಾರಿ, 02 ಜೂನ್ (ಹಿ.ಸ.) :
ಆ್ಯಂಕರ್ : ಅಣುವ್ರತ ಸಮಿತಿಯ ಬಳ್ಳಾರಿ ಶಾಖೆಯ 2025-2027ನೇ ಸಾಲಿಗೆ ನೂತನವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳಿಗೆ ಶ್ರೀ ಕಲ್ಯಾಣ ಸ್ವಾಮಿ ಮಠದಲ್ಲಿ ಕಲ್ಯಾಣ ಶ್ರೀಗಳು ಶುಭ ಕೋರಿ ಆಶೀರ್ವಾದ ಕೋರಿದ್ದಾರೆ.
ರವಿಶಂಕರ ಸ್ವಾಮಿಗಳ ಸಾನಿಧ್ಯದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಂಜು ಎಂಪೆÇೀರಿಯಂ ಮಾಲೀಕ ಬಸಂತ ಕುಮಾರ್ ಛಾಜಡ, ನಿಕಟಪೂರ್ವ ಅಧ್ಯಕ್ಷರಾಗಿರುವ ಪಾರಸ್ಮಲ್ ಖೆವೇಸರ್, ಉಪಾಧ್ಯಕ್ಷರಾದ ಮಂಗಲ್ ಚಾಂದ್ ನಾಹರ್, ಕಾರ್ಯದರ್ಶಿ ಶ್ರೀಮತಿ ಪ್ರವೀಣಾದೇವಿ, ಸಹ ಕಾರ್ಯದರ್ಶಿಗಳಾದ ವಿನೋದ್ ಕುಮಾರ್ ಖಿವೇಸರ್, ಸೊಂತ ಗಿರಿಧರ್, ಸಂಘಟನಾ ಕಾರ್ಯದರ್ಶಿಗಳಾದ ಅಶೋಕ್ ಕುಮಾರ್ ಚಾಜರ್, ರೂಪಚಂದ್ ಪರಾಕ್, ಖಜಾಂಚಿ ಬನ್ವಾರಿ ಗೋಯಂಕ ಮತ್ತು ಗೌರವ ಸಲಹೆಗಾರರಾದ ಗೌರಿಶಂಕರ ಅಗರವಾಲ್, ಕೆ.ಬಿ. ಸಿದ್ದಲಿಂಗಪ್ಪ ಅವರಿಗೆ ಶ್ರೀಗಳು ಭಾರತಾಂಬೆಯ ಭಾವಚಿತ್ರದ ಸ್ಮರಣಿಕೆಯನ್ನು ನೀಡಿ ಗೌರವಿಸಿ ಅಭಿನಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್