ಬಳ್ಳಾರಿ, 19 ಜೂನ್ (ಹಿ.ಸ.)
ಆ್ಯಂಕರ್: ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾ ವಿರಕ್ತಮಠ, ಶ್ರೀಧರಗಡ್ಡೆ.ಇವರ ಸಮ್ಮುಖದಲ್ಲಿ ಪೂಜ್ಯಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ಮೌನ ಅನುಷ್ಟಾನ ಮಂಗಲ ಕಾರ್ಯಕ್ರಮವು ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿರುವ ಶ್ರೀ ಕೊಟ್ಟೂರು ಸ್ವಾಮಿ,ಶಾಖ ವೀರಕ್ತ ಮಠದಲ್ಲಿ ಗುರುವಾರದಂದು ಶ್ರದ್ಧೆ ಭಕ್ತಿಯಿಂದ ನಡೆಯಿತು.
ಮಹಾಸ್ವಾಮಿಗಳ ಆತ್ಮಚಿಂತನ ಹಾಗೂ ಶಾಂತಿಯ ಸಂಕೇತವಾದ ಮೌನದ ಸಾಧನೆಗೆ ಭಕ್ತರು,ಶಿಷ್ಯರು ಹಾಗೂ ಸ್ಥಳೀಯರು ಭಾಗಿಯಾಗಿದ್ದು ಸ್ವಾಮಿಗಳ ಸಾಧನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಧಾರ್ಮಿಕ ಭಾಷಣಗಳು, ಸತ್ಸಂಗಗಳು ಹಾಗೂ ಪೌರಾಣಿಕ ಪಠಣಗಳು ಇಲ್ಲಿ ಪ್ರಮುಖವಾಗಿದ್ದವು.
ಕಾರ್ಯಕ್ರಮದಲ್ಲಿ ಪೂಜ್ಯಶ್ರೀ ಜಗದ್ಗುರು ಡಾ,ಸಂಗನಬಸವ ಮಹಾಶಿವಯೋಗಿಗಳವರ
ದಿವ್ಯ ಪ್ರಕಾಶದಲ್ಲಿ ಹಂಪಿ ಹೇಮಕೂಟ ಶೂನ್ಯಸಿಂಹಾಸನಾವೀಶ್ವರ ಪೂಜ್ಯಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳವರ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನ ಮಠ,ಹೊಸಪೇಟೆ-ಬಳ್ಳಾರಿ-ಹಾಲಕೆರೆ ಪೂಜ್ಯರ ಪಾವನ ಸನ್ನಿದಾನದಲ್ಲಿ,ಪೂಜ್ಯ ಶ್ರೀ ಮ.ನಿ.ಪ್ರ.ಕೊಟ್ಟೂರು ಮಹಾಸ್ವಾಮಿಗಳು,ಶ್ರೀ ಸಂಗನಬಸವೇಶ್ವರ ವಿರಕ್ತಮಠ, ದರೂರು.ಪೂಜ್ಯ ಶ್ರೀ ಮರಿಕೊಟ್ಟೂರು ದೇಶಿಕರ ಇವರ ಸಾನಿದ್ಯದಲ್ಲಿ ಗ್ರಾಮಗಳ ಮಠದ ಸದ್ಭಕ್ತರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್