ಬೆಂಗಳೂರು, 19 ಜೂನ್ (ಹಿ.ಸ.):
ಆ್ಯಂಕರ್:ಬೆಂಗಳೂರಿನ ನೆಲಮಂಗಲದ ಕ್ಷೇಮವನದಲ್ಲಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ನಡೆದ ವನಮಹೋತ್ಸವಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸಸಿ ನೆಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ನೈಸರ್ಗಿಕ ಸಂಪತ್ತನ್ನು ವಿವೇಚನಾತ್ಮಕವಾಗಿ ಬಳಸಿದರೆ ಮಾತ್ರ ಜೀವವೂ ಉಳಿಯುತ್ತದೆ, ಪ್ರಕೃತಿಯೂ ಉಳಿಯುತ್ತದೆ. ಜೈವಿಕ ಇಂಧನ ಬಳಕೆ, ಗಿಡ ನೆಡುವುದು, ಪರಿಸರ ರಕ್ಷಣೆ ಇವು ಸುಸ್ಥಿರ ಭವಿಷ್ಯಕ್ಕೆ ಅಗತ್ಯವಾಗಿದೆ ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa