ಉತ್ತರ ಪ್ರದೇಶ : ಸೇತುವೆಗೆ ಕಾರು ಡಿಕ್ಕಿ – ಐದು ಮಂದಿ ಸಜೀವ ದಹನ
ಬುಲಂದ್‌ಶಹರ್, 18 ಜೂನ್ (ಹಿ.ಸ.) : ಆ್ಯಂಕರ್ : ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಸೇತುವೆಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಐದು ಮಂದಿ ಸಜೀವ ದಹನವಾಗಿದ್ದಾರೆ. ಮೃತರು ಬದೌನ್ ಜಿಲ್ಲೆಯ ಸಹಸ್ವಾನ್ ಮೂಲದವರಾಗಿದ್ದು, ದೆಹಲಿಯ ಮಾಲ್ವ
Accident


ಬುಲಂದ್‌ಶಹರ್, 18 ಜೂನ್ (ಹಿ.ಸ.) :

ಆ್ಯಂಕರ್ : ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಸೇತುವೆಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಐದು ಮಂದಿ ಸಜೀವ ದಹನವಾಗಿದ್ದಾರೆ.

ಮೃತರು ಬದೌನ್ ಜಿಲ್ಲೆಯ ಸಹಸ್ವಾನ್ ಮೂಲದವರಾಗಿದ್ದು, ದೆಹಲಿಯ ಮಾಲ್ವಿಯಾ ನಗರದ ವಿವಾಹ ಸಮಾರಂಭದಿಂದ ಹಿಂತಿರುಗುತ್ತಿದ್ದರು. ಮೃತರಲ್ಲಿ ತನ್ವೀಜ್ ಅಹ್ಮದ್ (24), ಮೊಮಿನಾ (22), ಜುಬೇರ್ ಅಲಿ (25), ನಿದಾ (20), ಜೈನುಲ್ (02) ಸೇರಿದ್ದಾರೆ. ಗರ್ಭಿಣಿ ಯುವತಿ ಗುಲ್ನಾಜ್ (17) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆ ಜಹಾಂಗೀರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಜಾನಿಪುರ್ ಚಂದೌಸ್ ಗ್ರಾಮದ ಬಳಿ ನಡೆದಿದ್ದು, ಅತಿ ವೇಗವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ತಕ್ಷಣವೇ ಅಗ್ನಿಶಾಮಕ ದಳ ಹಾಗೂ ಪೊಲೀಸರು ಧಾವಿಸಿ ನೆರವಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande