ಬಳ್ಳಾರಿ, 18 ಜೂನ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಶಿಕ್ಷಕ ಕೆ. ಶಿವಲಿಂಗಪ್ಪ ಹಂದಿಹಾಳ್ ಅವರ 20121 ರಲ್ಲಿ ಪ್ರಕಟವಾಗಿರುವ ಸಣ್ಣ ಕಥೆಗಳ ಸಂಕಲನ `ನೋಟ್ಬುಕ್'ಗೆ ಕೇಂದ್ರ ಸಾಹಿತ್ಯ ಅಕಾಡಮಿ ನೀಡುವ 2025ರ ಸಾಲಿನ `ಬಾಲ ಸಾಹಿತ್ಯ ಪುರಸ್ಕಾರ' ಪ್ರಕಟವಾಗಿದೆ.
ಈ ಕುರಿತು ಕೇಂದ್ರ ಸಾಹಿತ್ಯ ಅಕಾಡಮಿಯು ಪತ್ರಿಕಾ ಪ್ರಕಟಣೆ ನೀಡಿದ್ದು, ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಪಡೆಯಲಿದ್ದಾರೆ. ಕನ್ನಡದ ಲೇಖಕರಾದ ಡಾ. ಬಸು ಬೇವಿನಗಿಡದ, ಡಾ. ಬೇಲೂರು ರಘುನಂದನ್ ಮತ್ತು ಎಚ್. ಶಶಿಕಲಾ ಅವರು ಈ ಪುರಸ್ಕಾರದ ತೀರ್ಪುಗಾರರಾಗಿದ್ದಾರೆ.
ಕೆ. ಶಿವಲಿಂಗಪ್ಪ ಹಂದಿಹಾಳ್ ಅವರು, ತುಂಬಾ ಸಂತೋಷವಾಗುತ್ತಿದೆ. ಪ್ರಶಸ್ತಿ ಮತ್ತು ಪುರಸ್ಕಾರದ ಕೀರ್ತಿಯು ಕನ್ನಡಿಗರಿಗೆ ಸಲ್ಲಬೇಕು. ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಶಸ್ತಿಗಳು - ಪುರಸ್ಕಾರಗಳು ಬಂದಲ್ಲಿ ಬರಹಗಾರರೂ ಹೆಚ್ಚಾಗಲಿದ್ದಾರೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್