ಬೆಂಗಳೂರು, 18 ಜೂನ್ (ಹಿ.ಸ.) :
ಆ್ಯಂಕರ್ : ಕೇರಳದ ಪ್ರಸಿದ್ಧ ಕೊಟ್ಟಿಯೂರ್ ಮಹಾದೇವ ದೇವಸ್ಥಾನಕ್ಕೆ ಸ್ಯಾಂಡಲ್ವುಡ್ ನಟ ದರ್ಶನ್ ಇತ್ತೀಚೆಗೆ ಕುಟುಂಬ ಸಮೇತ ಭೇಟಿ ನೀಡಿದ್ದಾರೆ.
ಮಳೆಯ ನಡುವೆ ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿದ ದರ್ಶನ್, ಈ ಹಿಂದೆಯೂ ಮಡಾಯಿಕ್ಕಾವು ದೇವಾಲಯಕ್ಕೆ ಭೇಟಿ ನೀಡಿದ್ದರು.
ಕೊಟ್ಟಿಯೂರ್ ದೇವಸ್ಥಾನವು ವರ್ಷದಲ್ಲಿ ಕೇವಲ 28 ದಿನಗಳು ಮಾತ್ರ ಭಕ್ತರಿಗೆ ತೆರೆಯಲ್ಪಡುತ್ತದೆ.
ಈ ವೇಳೆ ನಟ ದರ್ಶನ್ ಅವರ ಹೊಸ ಚಿತ್ರ ಡೆವಿಲ್ ಚಿತ್ರೀಕರಣದ ಮೊದಲ ಹಂತ ಮುಗಿದಿದ್ದು, ದುಬೈ ಹಾಗೂ ಯುರೋಪ್ ಪ್ರವಾಸಕ್ಕೆ ಸಿದ್ಧರಾಗಿದ್ದಾರೆ. ಈಗಾಗಲೇ ಒಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳಿಗೆ ಭಾರೀ ಬೇಡಿಕೆ ಉಂಟಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa