ಶ್ರೀಹರಿಕೋಟಾ, 16 ಜೂನ್ (ಹಿ.ಸ.) :
ಆ್ಯಂಕರ್ : ಇಸ್ರೋದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರಕ್ಕೆ ಭಾನುವಾರ ಮಧ್ಯರಾತ್ರಿ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆ, ಕೇಂದ್ರದ ಸುತ್ತ ಭದ್ರತೆ ಬಿಗಿಗೊಳಿಸಲಾಗಿದೆ.
ತಮಿಳುನಾಡಿನ ಕಮಾಂಡ್ ಕಂಟ್ರೋಲ್ ಸೆಂಟರ್ಗೆ ಭಯೋತ್ಪಾದಕರು ಕಡಲಮಾರ್ಗದಲ್ಲಿ ನುಸುಳಿ ಸ್ಫೋಟ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿಯೊಂದಿಗೆ ಕರೆ ಬಂದಿತ್ತು. ಬಳಿಕ ಸಿಐಎಸ್ಎಫ್, ರಾಜ್ಯ ಪೊಲೀಸ್ ಹಾಗೂ ಕರಾವಳಿ ಕಾವಲು ಪಡೆಗಳು ಶೋಧ ಕಾರ್ಯಾಚರಣೆ ನಡೆಸಿವೆ.
ನಾಯ್ಡುಪೇಟೆ ಉಪ ಪೋಲಿಸ್ ವರಿಷ್ಠಾಧಿಕಾರಿ ಚೆಂಚು ಬಾಬು ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತು. ಶೋಧ ನಂತರ ಈ ಕರೆ ದುಷ್ಕರ್ಮಿಗಳ ಕೃತ್ಯವೆಂದು ನಿರ್ಧರಿಸಲಾಗಿದೆ. ಭದ್ರತೆಗಾಗಿ ಕೇಂದ್ರದಲ್ಲಿ ಮತ್ತಷ್ಟು ಬಿಗುವಿನ ಕ್ರಮ ಕೈಗೊಳ್ಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa