ಮದುವೆಯಾಗು ಎಂದಿದಕ್ಕೆ‌ ಪ್ರೇಯಸಿ ಕೊಲೆ ; ಆರು ತಿಂಗಳ ನಂತರ ಪ್ರಿಯಕರ ಬಂಧನ
ಗದಗ, 15 ಜೂನ್ (ಹಿ.ಸ.) : ಆ್ಯಂಕರ್ : ಪ್ರೇಮದ ಹೆಸರಿನಲ್ಲಿ ಹೃದಯ ವಿದ್ರಾವಕ ಕೊಲೆ ಪ್ರಕರಣವೊಂದು ಇದೀಗ ಪೊಲೀಸರ ಜಾಣಾಕ್ಷತನ ತನಿಖೆಯಿಂದ ಬೆಳಕಿಗೆ ಬಂದಿದೆ. ಆರು ತಿಂಗಳ ಹಿಂದೆಯೇ ನಡೆದಿದ್ದ ಈ ಘಟನೆ ಒಂದು ಮೊಬೈಲ್ ಮೆಸೇಜ್‌ನಿಂದ ಕೊಲೆ ರಹಸ್ಯ ಬಯಲಾಗಿದೆ. ಮೃತ ಯುವತಿ ಮಧುಶ್ರೀ ಅಂಗಡಿ, ಗದಗ ತಾಲೂಕಿನ ನ
ಪೋಟೋ


ಗದಗ, 15 ಜೂನ್ (ಹಿ.ಸ.) :

ಆ್ಯಂಕರ್ : ಪ್ರೇಮದ ಹೆಸರಿನಲ್ಲಿ ಹೃದಯ ವಿದ್ರಾವಕ ಕೊಲೆ ಪ್ರಕರಣವೊಂದು ಇದೀಗ ಪೊಲೀಸರ ಜಾಣಾಕ್ಷತನ ತನಿಖೆಯಿಂದ ಬೆಳಕಿಗೆ ಬಂದಿದೆ. ಆರು ತಿಂಗಳ ಹಿಂದೆಯೇ ನಡೆದಿದ್ದ ಈ ಘಟನೆ ಒಂದು ಮೊಬೈಲ್ ಮೆಸೇಜ್‌ನಿಂದ ಕೊಲೆ ರಹಸ್ಯ ಬಯಲಾಗಿದೆ.

ಮೃತ ಯುವತಿ ಮಧುಶ್ರೀ ಅಂಗಡಿ, ಗದಗ ತಾಲೂಕಿನ ನಾರಾಯಣಪುರ ಗ್ರಾಮದ ನಿವಾಸಿ. ಮೃತ ಮಧುಶ್ರೀ ಹಾಗೂ ಆರೋಪಿ ಸತೀಶ್ ಹಿರೇಮಠ ನಡುವೆ ಸುಮಾರು ಆರು-ಏಳು ವರ್ಷಗಳಿಂದ ಪ್ರೀತಿ ಸಂಬಂಧವಿತ್ತು. ಸಂಬಂಧವನ್ನು ಗೊತ್ತಾದ ಮಧುಶ್ರೀಯ ಕುಟುಂಬಸ್ಥರು ಆಕೆಯನ್ನು ಗದಗದ ಸಂಬಂಧಿಕರ ಮನೆಗೆ ಸ್ಥಳಾಂತರಿಸಿದ್ದರು.

ಕೆಲ ತಿಂಗಳುಗಳ ದೂರವಿದ್ದ ಈ ಜೋಡಿ ಮತ್ತೆ ಸಂಪರ್ಕದಲ್ಲಿಗೆ ಬಂದಿದ್ದು, 2024ರ ಡಿಸೆಂಬರ್ 16ರಂದು ಮಧುಶ್ರೀ ಮನೆಯಿಂದ ನಾಪತ್ತೆಯಾಗಿದ್ದು, ಪೋಷಕರು ಹುಡುಕಾಟ ನಡೆಸಿದರೂ ಫಲ ಸಿಗದ ಕಾರಣ, 2025ರ ಜನವರಿ 12ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಈ ಸಂದರ್ಭದಲ್ಲಿ ಸತೀಶ್ ಮೇಲೆ ಅನುಮಾನ ಬಂದಿದ್ದು, ವಿಚಾರಣೆ ವೇಳೆ ತಾನು ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದ.

ಆದರೆ, ಸಿಸಿಟಿವಿ ದೃಶ್ಯಾವಳಿಯಲ್ಲಿ ಮಧುಶ್ರೀ ಹಾಗೂ ಸತೀಶ್ ಬೈಕ್‌ನಲ್ಲಿ ತೆರಳುತ್ತಿರುವುದು ದೃಢಪಟ್ಟ ನಂತರ, ತನಿಖೆ ತೀವ್ರಗೊಂಡಿತು. ಸತೀಶ್ ಹೇಳಿಕೆಯಂತೆ ಮಧುಶ್ರೀಯನ್ನು ಹಾತಲಗೇರಿ ಬಳಿ ಬಿಟ್ಟು ಹೋಗಿದ್ದೆ ಎಂದು ಹೇಳಿದ್ದ. ಆದರೆ, ನಂತರ ಆತನ ಮೊಬೈಲ್‌ಗೆ ಕಂಪನಿಯಿಂದ ಬಂದಿರುವ ಮೆಸೇಜ್‌ನ ಲೊಕೇಶನ್ ಬೇರೆ ಇರುವುದು ಪ್ರಕರಣಕ್ಕೆ ತಿರುವು ಕೊಟ್ಟಿತು.

ಆಧಾರದ ಮೇಲೆ ಪೊಲೀಸರು ಮತ್ತಷ್ಟು ತೀವ್ರವಾಗಿ ವಿಚಾರಣೆ ನಡೆಸಿದಾಗ ಸತೀಶ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಧುಶ್ರೀ ಮದುವೆಗೆ ಒತ್ತಡ ಹಾಕಿದ ಕಾರಣ ಇಬ್ಬರ ನಡುವೆ ಜಗಳವಾಯಿತು., ಸತೀಶ್ ಆಕೆಯ ವೇಲ್ ಬಳಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಹತ್ತಿರದ ಹಳ್ಳದಲ್ಲಿ ಪತ್ತೆ ಮಾಡಿ, ಸಮಯಾಂತರದಲ್ಲಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ.

ಪೊಲೀಸರು ಕೊನೆಗೆ ಶವದ ಕೆಲವು ಎಲುಬುಗಳು ದೊರಕಿದ ಸ್ಥಳದಲ್ಲಿ ತನಿಖೆ ಮುಂದುವರೆಸಿದ್ದು, ಡಿಎನ್‌ಎ ಪರೀಕ್ಷೆಗಾಗಿ ಅವಶೇಷಗಳನ್ನು ಲ್ಯಾಬ್‌ಗೆ ಕಳುಹಿಸಲಾಗುತ್ತಿದೆ. ಮಧುಶ್ರೀಯ ರುಂಡ ಇನ್ನೂ ಪತ್ತೆಯಾಗಿಲ್ಲ. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ ಎಂದು ಗದಗ ಎಸ್ಪಿ ಬಿ ಎಸ್ ನೇಮಗೌಡ ಅವರು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande