ಬಸಾರ್, 15 ಜೂನ್ (ಹಿ.ಸ.) :
ಆ್ಯಂಕರ್ : ತೆಲಂಗಾಣದ ನಿರ್ಮಲ್ ಜಿಲ್ಲೆಯ ಬಸಾರ್ನಲ್ಲಿ ಗೋದಾವರಿ ನದಿಯಲ್ಲಿ ಮುಳುಗಿ ಹೈದರಾಬಾದ್ನ ಐವರು ಯುವಕರು ಮೃತಪಟ್ಟಿದ್ದಾರೆ.
ಅಕ್ಷರಾಭಿಷೇಕದ ಧಾರ್ಮಿಕ ಯಾತ್ರೆಗಾಗಿ ಬಂದಿದ್ದ ಮೂರು ಕುಟುಂಬಗಳಲ್ಲಿ, ಒಂದೇ ಕುಟುಂಬದ ಐವರು ಯುವಕರು ಈ ದುರಂತದಲ್ಲಿ ಮೃತಪಟ್ಟಿದ್ದಾರೆ . ಮೃತರನ್ನು ರಾಕೇಶ್, ವಿನೋದ್, ಮದನ್, ರುತಿಕ್ ಮತ್ತು ಭರತ್ ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಭೈನ್ಸಾ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa