ತುಂಗಭದ್ರಾ ಐಸಿಸಿ ಸಭೆ ನಡೆಸಿ, ನೀರು ಹರಿಸುವ ದಿನಾಂಕ ಪ್ರಕಟಿಸಲು ಆಗ್ರಹ
ಬಳ್ಳಾರಿ, 13 ಜೂನ್ (ಹಿ.ಸ.) : ಆ್ಯಂಕರ್ : ತುಂಗಾಭದ್ರಾ ಜಲಾಶಯದಲ್ಲಿ ಕೇವಲ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಬಹುದಾಗಿದ್ದು, ಜೂನ್ 25ರೊಳಗಾಗಿ ಮೂರು ಕಾಲುವೆಗಳಿಗೆ ನೀರು ಹರಿಸುವ ಮೂಲಕ ಕೃಷಿಗೆ ನೆರವಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಆರ್. ಕರೂರು ಮಾಧವ ರೆಡ್ಡಿ ಅವರು ಮ
ತುಂಗಭದ್ರಾ ಐಸಿಸಿ ಸಭೆ ನಡೆಸಿ, ನೀರು ಹರಿಸುವ ದಿನಾಂಕ ಪ್ರಕಟಿಸಲು ಆಗ್ರಹ


ಬಳ್ಳಾರಿ, 13 ಜೂನ್ (ಹಿ.ಸ.) :

ಆ್ಯಂಕರ್ : ತುಂಗಾಭದ್ರಾ ಜಲಾಶಯದಲ್ಲಿ ಕೇವಲ 80 ಟಿಎಂಸಿ ನೀರನ್ನು ಮಾತ್ರ ಸಂಗ್ರಹಿಸಬಹುದಾಗಿದ್ದು, ಜೂನ್ 25ರೊಳಗಾಗಿ ಮೂರು ಕಾಲುವೆಗಳಿಗೆ ನೀರು ಹರಿಸುವ ಮೂಲಕ ಕೃಷಿಗೆ ನೆರವಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಆರ್. ಕರೂರು ಮಾಧವ ರೆಡ್ಡಿ ಅವರು ಮನವಿ ಮಾಡಿದ್ದಾರೆ.

ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, ತುಂಗಭದ್ರ ಜಲಾಶಯದಲ್ಲಿ 25 ರಿಂದ 30 ಟಿಎಂಸಿ ನೀರು ಸಂಗ್ರಹವಾದ ತಕ್ಷಣ ಮೂರು ಕಾಲುವೆಗಳಿಗೆ ನೀರನ್ನು ಹರಿಸಿ ಕೃಷಿ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ನೀರಿನ ಸಂಗ್ರಹ ಹೆಚ್ಚಾದಂತೆ ಜಲಾಶಯದ ಸಾಮಥ್ರ್ಯಕ್ಕೆ ಧಕ್ಕೆ ಬರಲಿದೆ, ನೀರು ನದಿಗೆ ಹರಿದು ಪೋಲಾಗಲಿದೆ ಎಂದರು.

ತುಂಗಭದ್ರಾ ಮಂಡಲಿಯು ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆದು ನೀರು ಹರಿಸುವ ದಿನಾಂಕ, ಪ್ರಮಾಣ ಇನ್ನಿತರೆಗಳನ್ನು ನಿರ್ಧರಿಸಿ, ರೈತರಿಗೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ರೈತರು ಗೊಂದಲಕ್ಕೀಡಾಗಿ ಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆಗಳು ನೆಲಕಚ್ಚಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಲೇಪಾಕ್ಷಿ ಪಂಪನಗೌಡ, ಬಸವರಾಜಸ್ವಾಮಿ, ಉಮಾಪತಿಗೌಡ, ವಿಶ್ವನಾಥ್, ಕೆ.ವಿ. ತಿಮ್ಮಾರೆಡ್ಡಿ, ಓಂಕಾರಪ್ಪ, ಪಂಪನಗೌಡ, ಸುರೇಂದ್ರ, ಸಂಜೀವರೆಡ್ಡಿ ಸೇರಿ ಅನೇಕರು ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande