ಬಳ್ಳಾರಿ, 11 ಜೂನ್ (ಹಿ.ಸ.) :
ಆ್ಯಂಕರ್ : ಐಪಿಎಲ್ ಸಂಭ್ರಮಾಚರಣೆಯ ಕಾಲ್ತುಳಿತದ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಕಮೀಷನರ್ ಆಗಿದ್ದ ದಕ್ಷ ಐಪಿಎಸ್ ಅಧಿಕಾರಿ ಬಿ. ದಯಾನಂದ್ ಅವರ ಅಮಾನತ್ತನ್ನು ತಕ್ಷಣವೆ ಹಿಂದಕ್ಕೆ ಪಡೆದು, ಅದೇ ಹುದ್ದೆಯಲ್ಲಿ ಪುನರ್ ನೇಮಕಾತಿ ಮಾಡಿಕೊಳ್ಳಲು ಆಗ್ರಹಿಸಿ ಕರವೆ (ಶಿವರಾಮೇಗೌಡ ಬಣ) ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣದ) ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾಧ್ಯಕ್ಷ ಜಿ. ರಾಜಶೇಖರ್ (ರಾಜಣ್ಣ) ಅವರು ಪ್ರತಿಭಟನೆಯ ನೇತೃತ್ವವಹಿಸಿ, ಬೆಂಗಳೂರಿನಲ್ಲಿ ಅಂಡರ್ವಲ್ರ್ಡ್, ಅಕ್ರಮ ಚಟುವಟಿಕೆಗಳು ಮತ್ತು ಬೆಟ್ಟಿಂಗ್ - ಗ್ಯಾಂಬ್ಲಿಂಗ್ ಸೇರಿ ಕಾನೂನು ವಿರೋಧಿ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿಯಂತ್ರಿಸಿದ್ದ ಜನಪ್ರಿಯ ಅಧಿಕಾರಿ - ದಕ್ಷ ಅಧಿಕಾರಿ ದಯಾನಂದ್ ಅವರನ್ನು ಅಮಾನತು ಮಾಡಿರುವುದು ತಪ್ಪು. ಕಾರಣ ಸರ್ಕಾರ ಅಮಾನತು ರದ್ದು ಮಾಡಿ, ತಕ್ಷಣವೇ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್