ಕಲಬುರಗಿ, 11 ಜೂನ್ (ಹಿ.ಸ.) :
ಆ್ಯಂಕರ್ : ಕಾರಹುಣ್ಣಿಮೇ ಹಿನ್ನಲೆ ಕಲಬುರಗಿ ನಗರದ ಜಗತ್ ಬಡಾವಣೆಯಲ್ಲಿ ಶ್ರೀ ಬಸವೇಶ್ವರ ಸೇವಾ ಸಮಾಜದ ವತಿಯಿಂದ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದ ಎತ್ತುಗಳಿಂದ ಕರಿ ಕಡಿಯಲಾಯಿತು.
ಕಾರಹುಣ್ಣಿಮೆ ಪ್ರಯುಕ್ತ ನಗರದ ಜಗತ್ ಬಡಾವಣೆಯ ವಾಡ್೯ ನಂಬರ್ 34ರಲ್ಲಿ ಶ್ರೀ ಬಸವೇಶ್ವರ ಸೇವಾ ಸಮಾಜದ ನೇತೃತ್ವದಲ್ಲಿ ರೈತರಾದ ಮಲ್ಲೇಶಪ್ಪ, ಪೀರಪ್ಪ, ಸೋಮಾ ಮತ್ತು ನಾಗೇಶ ದಂಡಪ್ಪಗೋಳ ಅವರ ಮನೆಯ ಎತ್ತುಗಳನ್ನು ವಿವಿಧ ಬಣ್ಣಗಳಿಂದ ಶೃಂಗರಿಸಿ ಸಂಪ್ರದಾಯದಂತೆ ಕರಿ ಕಡೆಯುವ ಮೂಲಕ ಸಂಭ್ರಮಿಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು, ಮಳೆಗಾಲ ಆರಂಭವಾದ ಹಿನ್ನಲೆ ರೈತರ ಹಬ್ಬವಾದ ಕಾರಹುಣ್ಣಿಮೇಯನ್ಮು ನಮ್ಮ ಪೂರ್ವಜರು ನಡೆಸುಕೊಂಡು ಬಂದತೆ ಈ ವರ್ಷವು ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಸಮಿತಿ ಮುಖಂಡರಾದ ಅಪ್ಪಣ್ಣಾ ಗುಡ್ಡ, ರಾಮಣ್ಣಾ ಸೋಮಾ, ಸಿದ್ದಣ್ಣಾ ಅಪ್ಪಣ್ಣಾ ಗುಡ್ಡ, ಶರಣಬಸಪ್ಪ ಅವಂಟಿಗಿ, ಮಹಾದೇವ ಅಂಬಣ್ಣಾಗೋಡಿ, ಶರಣಬಸಪ್ಪ ಮಹಾದೇವಪ್ಪ, ದೇವಣ್ಣಾ ಗಾಂಜಿ, ಶರಣಪ್ಪ ಬುಳ್ಳಾ, ಭೀಮರಾಯ ಕಟ್ಟಿಮನಿ ಸೇರಿದಂತೆ ಬಡಾವಣೆಯ ಅನೇಕ ಮುಖಂಡರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Samarth biral