11 ವರ್ಷದಲ್ಲಿ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆ : ಎಂ.ಎಂ.ಹಿರೇಮಠ
ಗದಗ, 10 ಜೂನ್ (ಹಿ.ಸ.) : ಆ್ಯಂಕರ್ : 2014 ರಲ್ಲಿ ಈ ದೇಶದ ಚುಕ್ಕಾಣೆಯನ್ನು ಹಿಡಿದ ಪ್ರಧಾನಿ ನರೇಂದ್ರ ಮೋದಿಯವರ 11 ವರ್ಷದ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಹಿಂದೆಂದೂ ಕಂಡರಿಯದಷ್ಟು ಅಭಿವೃದ್ಧಿ ಕಾಮಗಾರಿಗಳು ಈ 11 ವರ್ಷದಲ್ಲಿ ಕಂಡಿದ್ದು ದೇಶದಲ್ಲಿ ಒಂದು ಬಲವಾದ ಕ್ರಾಂತಿಕಾರಕ ಬದಲಾವಣೆ ದೇಶದಲ್ಲಿ ಆಗಿದ
ಪೋಟೋ


ಗದಗ, 10 ಜೂನ್ (ಹಿ.ಸ.) :

ಆ್ಯಂಕರ್ : 2014 ರಲ್ಲಿ ಈ ದೇಶದ ಚುಕ್ಕಾಣೆಯನ್ನು ಹಿಡಿದ ಪ್ರಧಾನಿ ನರೇಂದ್ರ ಮೋದಿಯವರ 11 ವರ್ಷದ ಆಡಳಿತದ ಅವಧಿಯಲ್ಲಿ ದೇಶದಲ್ಲಿ ಹಿಂದೆಂದೂ ಕಂಡರಿಯದಷ್ಟು ಅಭಿವೃದ್ಧಿ ಕಾಮಗಾರಿಗಳು ಈ 11 ವರ್ಷದಲ್ಲಿ ಕಂಡಿದ್ದು ದೇಶದಲ್ಲಿ ಒಂದು ಬಲವಾದ ಕ್ರಾಂತಿಕಾರಕ ಬದಲಾವಣೆ ದೇಶದಲ್ಲಿ ಆಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರರಾದ ಎಂ.ಎಂ.ಹಿರೇಮಠರವರು ನರೇಂದ್ರ ಮೋದಿಯವರ ಆಡಳಿತವನ್ನು ತುಂಬು ಹೃದಯದಿಂದ ಸ್ವಾಗತಿಸಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿರುವರು.

2014 ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ ಆಯ್ಕೆಯಾಗಿ ಅಂದಿನಿಂದ ಇಂದಿನ ವರೆಗಿನ 11 ವರ್ಷದ ಆಡಳಿತದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ದೇಶದಲ್ಲಿ ತಂದಿರುವರು. ಮೇಕ್ ಇನ್ ಇಂಡಿಯಾ ಮುಖಾಂತರ ಯುವಕರಿಗೆ ಉದ್ಯೋಗ ಒದಗಿಸಿಕೊಟ್ಟಿರುವರು. ಈಶಾನ್ಯ ರಾಜ್ಯಗಳಲ್ಲಿ ಹೊಸ ಅಭಿವೃದ್ಧಿಯ ಪರ್ವವವೇ ಹರಿದು ಬಂದಿದೆ.

ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಯೋಧ್ಯಯಲ್ಲಿ ರಾಮಮಂದಿರ ನಿರ್ಮಾಣ, ಜಮ್ಮು ಕಾಶ್ಮೀರದಲ್ಲಿದ್ದ ಆರ್ಟಿಕಲ್ 370 ತೆಗೆದುಹಾಕಿ ಕಾಶ್ಮೀರದಲ್ಲಿ ಅಭಿವೃದ್ಧಿಯ ಅನಾವರಣವಾಗಿದೆ. ಪ್ರತಿಯೊಬ್ಬ ಪ್ರಜೆಯು ಕೂಡಾ ಬ್ಯಾಂಕ್‍ನಲ್ಲಿ ಖಾತೆ ತೆರೆಯುವುದರ ಮೂಲಕ ಜನ್-ಧನ್ ಯೋಜನೆ ಜಾರಿಗೆ ತಂದು ಪ್ರತಿಯೊಬ್ಬ ವ್ಯಕ್ತಿಗೂ ಬ್ಯಾಂಕ್ ಮುಖಾಂತರ ವ್ಯವಹಾರವನ್ನು ನಡೆಸಲು ಉತ್ತೇಜಿಸಿದ್ದು, ತ್ರಿವಳಿ ತಲಾಖ್ ನಿಷೇಧಿಸಿ ಮುಸ್ಲಿಂ ಮಹಿಳೆಯರಿಗೆ ನ್ಯಾಯವನ್ನು ಒದಗಿಸಿರುವರು.

ದೇಶಾಧ್ಯಂತ ಜನಔಷಧ ಕೇಂದ್ರಗಳನ್ನು ತೆಗೆದು ಅಗ್ಗದ ಧರದಲ್ಲಿ ಔಷಧ ಪೂರೈಕೆ, ಆಪರೇಷನ್ ಸಿಂಧೂರ್ ಮುಖಾಂತರ ಪಾಕಿಸ್ತಾನಕ್ಕೆ ಯೋಗ್ಯ ರೀತಿಯಲ್ಲಿ ಶಿಕ್ಷೆಯನ್ನು ನೀಡಿರುವರು. ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆಯ ಭಾಗ್ಯ, ಮಹಿಳೆಯರಿಗೆ ಲೋಕಸಭೆ ಹಾಗು ವಿಧಾನಸಭೆಯಲ್ಲಿ ಶೇ 33% ರಷ್ಟ ಮಿಸಲಾತಿ ಜಾರಿಗೆ, 27 ಕೋಟಿ ಭಾರತೀಯರ ಬಡತನ ನಿರ್ಮೂಲನೆ, ಸಾವಿರಾರು ರೈಲ್ವೆ ಸ್ಟೇಷನ್‍ಗಳ ಅಭಿವೃದ್ಧಿ, ಶೇ 90% ರಷ್ಟು ರೈಲ್ವೆ ಇಲೆಕ್ಟ್ರೀಪಿಕೇಷನ್ ಪೂರ್ತಿಯಾಗಿರುವದು, ಜೋಡು ಹಳಿ ಮಾರ್ಗ ನಿರ್ಮಾಣ, ವಿದೇಶಾಂಗ ನೀತಿಯಲ್ಲಿ ಸಾಕಷ್ಟು ಬದಲಾವಣೆ ಎಲ್ಲ ದೇಶಗಳೊಂದಿಗೆ ಒಳ್ಳೆಯ ಸಂಭಂಧ, ಆಮದು ಮತ್ತು ರಫ್ತಿನ ಜೊತೆಗೆ ಎಲ್ಲ ದೇಶಗಳೊಂದಿಗೆ ವ್ಯಾಪಾರ ವಿನಿಮಯ, ಕೃಷಿ ಉತ್ಪಾದನೆಯಲ್ಲಿ ಸಾಕಷ್ಟು ಹೆಚ್ಚಳ, ಹೆಚ್ಚಿನ ಉತ್ಪಾದನೆಯನ್ನು ವಿದೇಶಕ್ಕೆ ರಫ್ತು, ರೈತರಿಗೆ ಬೇಕಾದ ಮೂಲಭೂತ ಸೌಲಭ್ಯಗಳ ವಿಸ್ತರಣೆ.

ಪ್ರತಿ ದಿವಸ 30 ಕಿ.ಮಿ. ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ಮೇಕ್ ಇನ್ ಇಂಡಿಯಾ ಮುಖಾಂತರ ಸಾಕಷ್ಟು ಉದ್ಯೆಮಗಳ ಸ್ಥಾಪನೆ, 2014 ರಲ್ಲಿ ಕೇವಲ 2 ಮೊಬೈಲ್ ಉತ್ಪಾದನಾ ಘಟಕಗಳು ಇದ್ದವು, ಇಂದು 200 ಕ್ಕಿಂತ ಹೆಚ್ಚು ಮೊಬೈಲ್ ಉತ್ಪಾದನಾ ಘಟಕಗಳು ಸ್ಥಾಪನೆಯಾಗಿವೆ, ಜಗತ್ತಿನಲ್ಲಿ ಮೊಬೈಲ್ ರಫ್ತು ನಲ್ಲಿ ಭಾರತ 2ನೇ ಸ್ಥಾನದಲ್ಲಿದೆ.

ನಮಗೆ ಬೇಕಾದ ಯುದ್ಧದ ಸಲಕರಣೆಗಳು ದೇಶಿಯವಾಗಿ ಉತ್ಪಾದನೆ ಮಾಡಿ ಸಾವಿರಾರು ಕೋಟಿ ರೂಪಾಯಿ ವಿದೇಶಿ ವಿನಿಮಯ ಉಳಿತಾಯ, ನಮ್ಮ ಭಾರತದ ಭ್ರಮೊಸ್ಸ್ ತಯಾರಿಕೆ, ಭಾರತದ ಭ್ರಮೊಸ್‍ಗೆ 17 ದೇಶಗಳಿಂದ ಬೇಡಿಕೆ, 2014 ರಲ್ಲಿ ಭಾರತದ ಆರ್ಥಿಕ ಪರಿಸ್ಥಿತಿ 11 ನೇ ಸ್ಥಾನದಲ್ಲಿತ್ತು. ಆದರೆ ಇಂದು ಪ್ರಧಾನಿ ನರೇಂದ್ರ ಮೋದಯವರ ನೇತೃತ್ವದ ಸರ್ಕಾರದಲ್ಲಿ ಭಾರತ ಜಗತ್ತಿನಲ್ಲಿಯೇ 4ನೇ ಸ್ಥಾನಕ್ಕೆ ಬಂದು ನಿಂತಿದೆ. ಇನ್ನು ಕೆಲವೇ ದಿನಗಳಲ್ಲಿ ಭಾರತ ಜಗತ್ತಿನ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ.

ಬಡವರಿಗೆ 10 ಕೋಟಿ ಗ್ಯಾಸ್ ವಿತರಣೆ, 4 ಕೋಟಿ ಹೊಸ ಮನೆಗಳ ನಿರ್ಮಾಣ, 11 ಕೋಟಿ ಶೌಚಾಲಯ ನಿರ್ಮಾಣ, ಪ್ರತಿ ಮನೆಗೆ ನೀರಿನ ಸೌಲಭ್ಯ, ಆಹಾರ ಗ್ಯಾರಂಟಿ ಯೋಜನೆ, ಕಳೆದ 11 ವರ್ಷದಲ್ಲಿ ಕೇಂದ್ರ ಸರ್ಕಾರದ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪಗಳಿಲ್ಲಾ. ಯಾವುದೇ ಸಚಿವರ ಮೇಲೆಯೂ ಕೂಡಾ ಒಂದೇ ಒಂದು ಭ್ರಷ್ಟಾಚಾರದ ಆರೋಪಗಳಿಲ್ಲ.

ಈ ರೀತಿಯಾಗಿ ಇವತ್ತು ಭಾರತ ಜಗತ್ತಿನಲ್ಲಿಯೇ ಅತೀ ಬಲಿಷ್ಠವಾದ ದೇಶವಾಗಿದೆ. ಇದೆಲ್ಲದ್ದಕ್ಕೂ ಕಾರಣ ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರ ದೃಢ ಸಂಕಲ್ಪ, ಸಮರ್ಥ ನಾಯಕತ್ವ, ಗುರಿಯನ್ನು ಸಾಧಿಸುವ ಚಲ, ಹೊಸ ಚಿಂತನೆಗಳನ್ನು ಅನುಷ್ಠಾನಕ್ಕೆ ತರುವ ತುಡಿತ, ರಾಷ್ಟ್ರ ಮೊದಲೂ ಎಂಬ ಬದ್ಧತೆ ಇವೆಲ್ಲವುಗಳಿಂದ ಇವತ್ತು ಭಾರತ ದೇಶ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಮೋದಿಯವರ ಸಾಧನೆಯನ್ನು ಕಂಡು ಅನೇಕ ದೇಶಗಳು ಮೋದಿಯವರಿಗೆ ಅತ್ಯುನ್ನತ ಪುರಸ್ಕಾರಗಳನ್ನು ನೀಡಿ ಅವರ ನಾಯಕತ್ವ ಗುಣವನ್ನು ಪ್ರಶಂಸಿವೆ ಎಂದು ಜಿಲ್ಲಾ ಬಿಜೆಪಿ ವಕ್ತಾರರಾದ ಎಂ.ಎಂ.ಹಿರೇಮಠರವರು 11 ವರ್ಷದ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Lalita MP


 rajesh pande