ಬೆಂಗಳೂರು, 10 ಜೂನ್ (ಹಿ.ಸ.) :
ಆ್ಯಂಕರ್ : ಪ್ರಧಾನ ಮಂತ್ರಿ ಮೋದಿ ಹೆಸರು ಕಾಂಗ್ರೆಸ್ನವರಿಗೆ ಅಲರ್ಜಿ, ಯಾಕೆಂದರೆ ಅಲ್ಲಿ ಇರುವುದು ನಕಲಿ ಗಾಂಧಿ ಪರಿವಾರದವರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ಎಂದ ಕೂಡಲೇ ಕಾಂಗ್ರೆಸ್ನವರಿಗೆ ನಡುಕ ಉಂಟಾಗುತ್ತದೆ. ಅದಕ್ಕೆ ಜನೌಷಧ ಕೇಂದ್ರ ಮುಚ್ಚುವ ಹುಚ್ಚಾಟ ಮಾಡುತ್ತಿದ್ದಾರೆ. ಮೋದಿ ಸರ್ಕಾರದ ಸಾಧನೆಗೆ ಸೊನ್ನೆ ಅಂಕ ಕೊಡುವವರಿಗೆ ಓದುವಂತಹ ಬುದ್ದಿ ಇರಬೇಕು. ಇಲ್ಲದಿದ್ದರೆ ಓದುವಂತಹವರನ್ನು ಜೊತೆಯಲ್ಲಿ ಇಟ್ಟುಕೊಂಡಿರಬೇಕು ಎಂದರು.
ವಂದೇ ಭಾರತ್ ರೈಲು ಯೋಜನೆಯನ್ನು ಅಪಹಾಸ್ಯ ಮಾಡಿದ್ದರು. ಹಿಂದೆ ಜಲ ಮಾರ್ಗದ ಸ್ಥಾಪನೆಗೆ ಅವಕಾಶ ಇದ್ದರೂ ಮಾಡಿರಲಿಲ್ಲ. ದೇಶದ ರಾಜಕೀಯ ಇತಿಹಾಸದಲ್ಲಿ ಇದು ಪರಿವರ್ತನೆಯ ಪರ್ವ. ವಿಕಾಸ ನಮ್ಮ ಪರ್ವ, ಅಭಿವೃದ್ಧಿ ನಮ್ಮ ಬದ್ಧತೆ. ಮುಂದಿನ ವರ್ಷಗಳಲ್ಲಿ ಭಾರತ 3ನೇ ಆರ್ಥಿಕ ಶಕ್ತಿಯಾಗಿ ರೂಪುಗೊಳ್ಳಲಿದೆ ಎಂದು ಜೋಶಿ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa