ಚಿನ್ನಸ್ವಾಮಿ ಕ್ರೀಡಾಂಗಣದಿಂದ ಪಂದ್ಯಗಳ ಸ್ಥಳಾಂತರ
ಬೆಂಗಳೂರು, 10 ಜೂನ್ (ಹಿ.ಸ.) : ಆ್ಯಂಕರ್ : ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 4ರಂದು ನಡೆದ ಕಾಲ್ತುಳಿತದ ಬಳಿಕ, ಬಿಸಿಸಿಐ ಗಂಭೀರ ಕ್ರಮ ಕೈಗೊಂಡಿದೆ. ಭಾರತದ ''ಎ'' ಹಾಗೂ ದಕ್ಷಿಣ ಆಫ್ರಿಕಾ ''ಎ'' ನಡುವಿನ ನವೆಂಬರ್‌ನಲ್ಲಿ ನಡೆಯಬೇಕಿದ್ದ ಮೂರು ಏಕದಿನ ಪಂದ್ಯಗಳನ್ನು ರಾಜ್‌ಕೋಟ್‌
Bcci


ಬೆಂಗಳೂರು, 10 ಜೂನ್ (ಹಿ.ಸ.) :

ಆ್ಯಂಕರ್ : ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 4ರಂದು ನಡೆದ ಕಾಲ್ತುಳಿತದ ಬಳಿಕ, ಬಿಸಿಸಿಐ ಗಂಭೀರ ಕ್ರಮ ಕೈಗೊಂಡಿದೆ. ಭಾರತದ 'ಎ' ಹಾಗೂ ದಕ್ಷಿಣ ಆಫ್ರಿಕಾ 'ಎ' ನಡುವಿನ ನವೆಂಬರ್‌ನಲ್ಲಿ ನಡೆಯಬೇಕಿದ್ದ ಮೂರು ಏಕದಿನ ಪಂದ್ಯಗಳನ್ನು ರಾಜ್‌ಕೋಟ್‌ಗೆ ಸ್ಥಳಾಂತರಿಸಲಾಗಿದೆ.

ಬಿಸಿಸಿಐ ಸ್ಪಷ್ಟ ಕಾರಣವನ್ನು ನೀಡದಿದ್ದರೂ, ಕಾಲ್ತುಳಿತ ಪ್ರಕರಣವೇ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಇದೇ ರೀತಿಯಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್ ಉದ್ಘಾಟನಾ ಪಂದ್ಯವನ್ನು ಕೂಡ ಬೇರೆಡೆ ಸ್ಥಳಾಂತರ ಮಾಡುವ ಸಾಧ್ಯತೆ ಇದೆ.

2026ರ ಟಿ20 ವಿಶ್ವಕಪ್ ಪಂದ್ಯಗಳು ನಡೆಯಲಿರುವ ಸ್ಟೇಡಿಯಂಗಳ ಪಟ್ಟಿಯಿಂದ ಚಿನ್ನಸ್ವಾಮಿಯನ್ನು ಕೈಬಿಡುವ ಸಾಧ್ಯತೆಯೂ ಇದೆ. ಆಡಳಿತಾತ್ಮಕ ಸ್ಥಿರತೆ ಮೇಲೆ ಅನುಮಾನ ಮೂಡಿರುವ ಕಾರಣ, ಬಿಸಿಸಿಐ ಇದೀಗ ಬೆಂಗಳೂರಿನಲ್ಲಿ ಪಂದ್ಯ ಆಯೋಜನೆಗೆ ತಾತ್ಕಾಲಿಕ ವಿರಾಮ ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande