ಕಂಪ್ಲಿ, 10 ಜೂನ್ (ಹಿ.ಸ.) :
ಆ್ಯಂಕರ್ : ತಾಲೂಕಿನ ನಂ.3 ಸಣಾಪುರ ಗ್ರಾಮದ ತುಂಗಭದ್ರಾ ನದಿ ತಟದಲ್ಲಿ ಈಜಲು ಹೋಗಿದ್ದ ಬಾಲಕನ ಮೇಲೆ ಮೊಸಳೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಮಂಗಳವಾರ ನಡೆದಿದೆ.
ಗಾಯಗೊಂಡ ವೇದಮೂರ್ತಿ (16) ತುಂಗಭದ್ರಾ ನದಿಗೆ ಈಜಲೂ ಇಳಿದಾಗ ಬಾಲಕನ ಮೇಲೆ ಮೊಸಳೆಯೊಂದು ಏಕಾಯಕಿ ದಾಳಿ ಮಾಡಿ ಎಡ ಭುಜವನ್ನು ಕಚ್ಚಿದೆ, ಬಾಲಕನು ತನ್ನ ಮೇಲೆ ಮೊಸಳೆ ದಾಳಿ ಮಾಡಿದೆ ಯಾರದರು ಬಂದು ಕಾಪಾಡಿ ಎಂದು ಜೋರಾಗಿ ಕೂಗಿಕೊಂಡಿದ್ದಾನೆ.
ಅಲ್ಲೆ ಸ್ಥಳದಲ್ಲಿದ್ದ ವೀರೇಶ್ ಎಂಬ ಯುವಕನು ಬಾಲಕನ ಮೇಲೆ ಮೊಸಳೆ ದಾಳಿ ಮಾಡಿರುವದನ್ನು ಕಂಡು ಅಲ್ಲೆ ಇದ್ದ ಕಲ್ಲುಗಳನ್ನು ಎತ್ತಿ ಮೊಸಳೆಯ ಮೇಲೆ ಎಸೆದಿದ್ದಾನೆ , ನಂತರ ಮೊಸಳೆಯು ಬಾಲಕನನ್ನು ಮೊಸಳೆ ಬಿಟ್ಟು ಹೋಗಿದ್ದು ನಂತರ ಬಾಲಕನನ್ನು ಮೇಲೆ ಕರೆದುಕೊಂಡು ಬಂದಿದ್ದಾರೆ.
ಮೊಸಳೆಯ ದಾಳಿಗೆ ಬಾಲಕ ವೇದ ಮೂರ್ತಿಯ ದೇಹ ರಕ್ತ ಸಿಕ್ತವಾಗಿದ್ದು ಕೂಡಲೇ ಕಂಪ್ಲಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯು ನದಿ ಪಾತ್ರದ ಜನರಲ್ಲಿ ಹಾಗೂ ರೈತರಲ್ಲಿ ಆತಂಕ ಮೂಡಿಸಿದೆ.
ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೊಸಳೆ ಸೆರೆ ಹಿಡಿಯಲೂ ಸ್ಥಳಿಯರು ಆಗ್ರಹಿಸಿದ್ದು ಕಂಪ್ಲಿ ಕೋಟೆ, ಬೆಳಗೋಡುಹಾಳ್ , ಸಣಾಪುರ, ಇಟಗಿ ಗ್ರಾಮಗಳ ತುಂಗಭದ್ರಾ ನದಿ ತಟದಲ್ಲಿ ಹೆಚ್ಚಾಗಿ ಮೊಸಳೆಗಳು ಕಂಡು ಬರುತ್ತಿವೆ. ಈ ಘಟನೆಯಿಂದ ಇದೀಗ ಜನರಿಗೆ ನದಿಯ ಬಳಿ ತೆರಳಲು, ಹಾಗೂ ನದಿ ಪಾತ್ರದ ಜಮೀನುಗಳಿಗೆ ರೈತರು ತೆರಳಲು ಭಯದ ವಾತಾವರಣ ಸೃಷ್ಠಿಯಾಗಿದೆ. ಈ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಮೊಸಳೆ ಸೆರೆ ಹಿಡಿದು ಬೇರೆಡೆ ಸಾಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್