ಬಳ್ಳಾರಿ : ವಿಧಾನ ಪರಿಷತ್ ಸದಸ್ಯತ್ವನ್ನು ರದ್ದು ಮಾಡಲು ಆಗ್ರಹ
ಬಳ್ಳಾರಿ, 10 ಜೂನ್ (ಹಿ.ಸ.) : ಆ್ಯಂಕರ್ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರ ಕುರಿತು ಕೀಳುಮಟ್ಟದಲ್ಲಿ ಟೀಕಿಸುತ್ತಿರುವ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಸಚೇತಕ ವಿ. ರವಿಕುಮಾರ್ ಅವರ ಸದಸ್ಯತ್ವ ರದ್ದು ಮಾಡಲು ಆಗ್ರಹಿಸಿ ದಲಿತ
ಬಳ್ಳಾರಿ : ವಿಧಾನಪರಿಷತ್ ಸದಸ್ಯತ್ವನ್ನು ರದ್ದು ಮಾಡಲು ಆಗ್ರಹ


ಬಳ್ಳಾರಿ : ವಿಧಾನಪರಿಷತ್ ಸದಸ್ಯತ್ವನ್ನು ರದ್ದು ಮಾಡಲು ಆಗ್ರಹ


ಬಳ್ಳಾರಿ, 10 ಜೂನ್ (ಹಿ.ಸ.) :

ಆ್ಯಂಕರ್ : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರ ಕುರಿತು ಕೀಳುಮಟ್ಟದಲ್ಲಿ ಟೀಕಿಸುತ್ತಿರುವ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಸಚೇತಕ ವಿ. ರವಿಕುಮಾರ್ ಅವರ ಸದಸ್ಯತ್ವ ರದ್ದು ಮಾಡಲು ಆಗ್ರಹಿಸಿ ದಲಿತ ಮುಖಂಡರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

ಪ್ರತಿಭಟನೆಯ ನೇತೃತ್ವವಹಿಸಿದ್ದ ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎ. ಮಾನಯ್ಯ ಅವರು, ಆರ್‍ಎಸ್‍ಎಸ್ ಮತ್ತು ಬಿಜೆಪಿ ದಲಿತ ಮನುವಾದಿಗಳಾಗಿರುವ ಮನುವಾದಿ ನಾರಾಯಣಸ್ವಾಮಿ ಮತ್ತು ವಿ. ರವಿಕುಮಾರ್ ಅವರನ್ನು ಬಳಕೆ ಮಾಡಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ಕೊಡಿಸುತ್ತಿದೆ. ಮನೆಹಾಳ ಮನುವಾದಿ ಬಿಜೆಪಿಯವರ ನೀಚ ಪ್ರವೃತ್ತಿಯನ್ನು ದಲಿತ ಸಮುದಾಯ ಖಂಡಿಸುತ್ತದೆ ಎಂದರು.

ಛಲವಾದಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಸಿ. ನರಸಪ್ಪ, ಜಿಲ್ಲಾ ಸಂಘಟನಾ ಸಂಚಾಲಕ ಕೆ. ದೇವದಾಸ್, ಎಚ್/ ಆಂಜನೇಯ, ಕೊಳಗಲ್ ಮಲ್ಲಯ್ಯ, ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾಧ್ಯಕ್ಷ ಆನಂದ್ ಕುಮಾರ್, ದಲಿತ ವಿದ್ಯಾರ್ಥಿ ಸಂಚಾಲಕ ಎಚ್. ಶಂಕರ್ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಡಾ. ಬಿ.ಆರ್. ಅಂಬೇಡ್ಕರ್ ಭವನದಿಂದ ಪ್ರತಿಭಟನೆ ಪ್ರಾರಂಭವಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಸಮಾರೋಪಗೊಂಡಿತು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande