ನವದೆಹಲಿ, 31 ಮೇ (ಹಿ.ಸ.) :
ಆ್ಯಂಕರ್ : ಸ್ವಾತಂತ್ರ್ಯದ ಬಳಿಕ ಭಾರತದ ದೊಡ್ಡ ಸಮಸ್ಯೆ ಸ್ವಯಂ ಮರೆವು, ಆತ್ಮಸಾಕ್ಷಾತ್ಕಾರವಿಲ್ಲದೆ ಸ್ವಾವಲಂಬನೆ ಸಾಧ್ಯವಿಲ್ಲ ಎಂದು ಆರ್ಎಸ್ಎಸ್ನ ಸಹ-ರ್ಕಾರ್ಯವಾಹ ಅರುಣ್ ಕುಮಾರ್ ಹೇಳಿದರು.
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಏಕಾತ್ಮ ಮಾನವ ದರ್ಶನದ 60ನೇ ವಾರ್ಷಿಕೋತ್ಸವದ ಅಂಗವಾಗಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಸ್ಮಾರಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೀನದಯಾಳ್ ಅವರ ತತ್ವಶಾಸ್ತ್ರವು ವ್ಯಕ್ತಿಯಿಂದ ರಾಷ್ಟ್ರವರೆಗೆ ಪರಿವರ್ತನೆ ತರಲು ಮಾರ್ಗದೀಪವಾಗಿದೆ ಎಂದರು.
ಸಮಗ್ರ ಮಾನವತಾವಾದ ತತ್ವಶಾಸ್ತ್ರವು ವ್ಯಕ್ತಿ, ಸಮಾಜ ಮತ್ತು ರಾಷ್ಟ್ರವನ್ನು ಏಕಘಟಕವಾಗಿ ಪರಿಗಣಿಸುತ್ತದೆ. ದೇಶದ ಪ್ರಗತಿಯ ಮೂಲದಲ್ಲಿ ರಾಷ್ಟ್ರೀಯ ಪ್ರಜ್ಞೆ ಮತ್ತು ಆಧ್ಯಾಯಾತ್ಮಿಕ ಅಸ್ಮಿತೆಯ ಪುನಃಸ್ಥಾಪನೆ ಅಗತ್ಯ ಎಂದು ಹೇಳಿದರು.
ವಿದೇಶಿ ಸಿದ್ಧಾಂತಗಳನ್ನು ಅನುಕರಿಸಿ ನಾವೇನಾಗಿದ್ದೇವೆ ಎಂಬುದನ್ನು ಮರೆತಿದ್ದೇವೆ. ನಮ್ಮ ವೈಶಿಷ್ಟ್ಯ ಧರ್ಮವಾಗಿದೆ—ಇದು ಪೂಜೆಯಲ್ಲ, ಜೀವನವ್ಯಾಪಿ ಮೌಲ್ಯ ಪದ್ಧತಿಯಾಗಿದೆ ಎಂದು ಅರುಣ ಕುಮಾರ್ ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa