ಹಿಮಾಲಯ ಪರಿಸರ ರಕ್ಷಣೆಗೆ ಭಾರತ ಬದ್ದ : ಸಚಿವ ಕೀರ್ತಿ ವರ್ಧನ್ ಸಿಂಗ್
ನವದೆಹಲಿ, 31 ಮೇ (ಹಿ.ಸ.) : ಆ್ಯಂಕರ್ : ತಜಕಿಸ್ತಾನದ ದುಶಾಂಬೆ ನಗರದಲ್ಲಿ ಮೇ 29ರಿಂದ 31ರವರೆಗೆ ನಡೆದ ಹಿಮನದಿ ಸಂರಕ್ಷಣೆಯ ಅಂತಾರಾಷ್ಟ್ರೀಯ ಉನ್ನತ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಿದ ಕೇಂದ್ರ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ಭಾರತವು ಹಿಮಾಲಯ ಪರಿಸರ ಸಂರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.
Conference


ನವದೆಹಲಿ, 31 ಮೇ (ಹಿ.ಸ.) :

ಆ್ಯಂಕರ್ : ತಜಕಿಸ್ತಾನದ ದುಶಾಂಬೆ ನಗರದಲ್ಲಿ ಮೇ 29ರಿಂದ 31ರವರೆಗೆ ನಡೆದ ಹಿಮನದಿ ಸಂರಕ್ಷಣೆಯ ಅಂತಾರಾಷ್ಟ್ರೀಯ ಉನ್ನತ ಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಿದ ಕೇಂದ್ರ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ಭಾರತವು ಹಿಮಾಲಯ ಪರಿಸರ ಸಂರಕ್ಷಣೆಗೆ ಬದ್ಧವಾಗಿದೆ ಎಂದು ಹೇಳಿದರು.

ಹಿಮನದಿಗಳ ಕರಗುವಿಕೆ ತ್ವರಿತ ಎಚ್ಚರಿಕೆಯ ವಿಷಯವಾಗಿದ್ದು, ನೀರಿನ ಭದ್ರತೆ ಹಾಗೂ ಜೀವವೈವಿಧ್ಯಕ್ಕೆ ಸವಾಲು ಉಂಟುಮಾಡುತ್ತಿದೆ ಎಂದು ಅವರು. ಹವಾಮಾನ ಬದಲಾವಣೆಯ ವಿರುದ್ಧ ಭಾರತ ಹವಾಮಾನ ಕಾರ್ಯತಂತ್ರ, ರಾಷ್ಟ್ರೀಯ ಮಿಷನ್‌ಗಳು ಹಾಗೂ ಇಸ್ರೋ ತಂತ್ರಜ್ಞಾನಗಳ ಮೂಲಕ ಕ್ರಮ ಕೈಗೊಂಡಿದೆ ಎಂದರು.

ಪ್ಯಾರಿಸ್ ಒಪ್ಪಂದದಡಿಯಲ್ಲಿ ನಿಗದಿತ ಉದ್ದೇಶಗಳನ್ನು ಭಾರತ ಸಾಧಿಸುತ್ತಿದ್ದು, ಇಂಧನ ಉತ್ಪಾದನೆಯಲ್ಲಿ ಶೇಕಡಾ 48ರಷ್ಟು ಪಳೆಯುಳಿಕೆಯೇತರ ಶಕ್ತಿ ಮೂಲಗಳಿಂದ ಸಾಧ್ಯವಾಗಿದೆ. ಜಿಡಿಪಿಯ ಉತ್ಸರ್ಜನೆ ತೀವ್ರತೆಯು ಶೇಕಡಾ 36ರಷ್ಟು ಇಳಿಕೆ ಕಂಡಿದೆ. ವನ್ಯವಲಯ ವೃದ್ಧಿಯಿಂದ 2.29 ಶತಕೋಟಿ ಟನ್ ಇಂಗಾಲದ ಡೈಆಕ್ಸೈಡ್ ಶೋಷಣೆಯು ಸಾಧ್ಯವಾಗಿದೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಪ್ರಾದೇಶಿಕ ಸಹಕಾರ, ದತ್ತಾಂಶ ಹಂಚಿಕೆ ಹಾಗೂ ವಿಪತ್ತು ನಿರ್ವಹಣೆಯ ಸಂಘಟಿತ ಕಾರ್ಯವಿಧಾನದ ಅಗತ್ಯತೆಗಳ ಕುರಿತು ಭಾರತದ ನಿಲುವನ್ನು ಸಭೆಯಲ್ಲಿ ಸಚಿವರು ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande