ರಾಯಚೂರು, 31 ಮೇ (ಹಿ.ಸ.) :
ಆ್ಯಂಕರ್ : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ನಿವಾಸಿಯಾದ ವಿಕಲಚೇತನ ಹೊನ್ನಮ್ಮ (24) ತಂದೆ ಸಾಬಯ್ಯ ಮೇ 26ರ ಬೆಳಿಗ್ಗೆ 8 ಗಂಟೆಗೆ ಗಬ್ಬೂರ ಹೊಸ ಬಸ್ ನಿಲ್ದಾಣದ ಹತ್ತಿರ ಇರುವ ಆಂಜನೇಯ ದೇವಸ್ಥಾನದಲ್ಲಿ ಇದ್ದ ವಿಕಲಚೇತನರ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಂತರ ಕಾಣೆಯಾದ ಬಗ್ಗೆ ಗಬ್ಬೂರು ಠಾಣಾ ಗುನ್ನೆ ನಂ-87/2025 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಹೊನ್ನವ್ಮ್ಮಳು ಹೊಲಿಗೆಯಂತ್ರದಿಂದ ಬಟ್ಟೆ ಹೊಲಿದು ಜೀವನ ನಡೆಸ್ಮತ್ತಿದ್ದಳು. ಈ ಮಧ್ಯೆ ವಿಕಲಚೇತನರಿಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಳು. ಮೇ 26ರ ಬೆಳಿಗ್ಗೆ 8 ಗಂಟೆಗೆ ತಮ್ಮ ತಂದೆ ಸಾಬಯ್ಯ ಜೊತೆಗೆ ಕಾರ್ಯಕ್ರಮಕ್ಕೆ ಹೋದವಳು ಕಾರ್ಯಕ್ರಮ ಬಳಿಕ ಕಾಣೆಯಾಗಿದ್ದಾಳೆ.
ಚಹರೆ ಪಟ್ಟಿ: ಹೊನ್ನಮ್ಮ ಅವರು ಸದೃಢ ದೇಹ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಇದ್ದು, 5.0 ಅಡಿ ಎತ್ತರ, ವಕ್ರವಾದ ಕಾಲುಗಳಿದ್ದು, ನಡೆಯಲ್ಲಿ ಏರುಪೇರಾಗುತ್ತದೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೂಡಿದಾರ ಉಡುಪು ಧರಿಸಿದ್ದು, ಕನ್ನಡ ಮಾತನಾಡುತ್ತಾಳೆ.
ಈ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಗಬ್ಬೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 9480803860, ದೇವದುರ್ಗ ಸಿಪಿಐ ಮೊಬೈಲ್ ಸಂಖ್ಯೆ: 9480803835ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಗಬ್ಬೂರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್