ಟಿಬಿ ಡ್ಯಾಂ ಕ್ರೆಸ್ಟ್‍ಗೇಟ್ ಅಳವಡಿಕೆ : ಗೊಂದಲ ನಿವಾರಣೆಗೆ ತುಂಗಭದ್ರ ರೈತ ಸಂಘ ಆಗ್ರಹ
ಬಳ್ಳಾರಿ, 30 ಮೇ (ಹಿ.ಸ.) : ಆ್ಯಂಕರ್ : ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ರಾಜ್ಯಗಳ ರೈತರ ಜೀವನಾಡಿ ಆಗಿರುವ ತುಂಗಭದ್ರ ಜಲಾಶಯದ 33 ಕ್ರೆಸ್ಟ್‍ಗೇಟ್‍ಗಳ ಅಳವಡಿಕೆ ಕುರಿತು ಗೊಂದಲದ ಹೇಳಿಕೆಗಳನ್ನು ನೀಡುವ ಬದಲು, ನೀರಾವರಿ ತಜ್ಞರು, ವಿಷಯ ತಜ್ಞರು ಮತ್ತು ನಿವೃತ್ತ - ಹಾಲಿ ಅಧಿಕಾರಿಗಳ ತುರ್ತು
ಬಳ್ಳಾರಿ : ಟಿಬಿ ಡ್ಯಾಂ ಕ್ರೆಸ್ಟ್‍ಗೇಟ್ ಅಳವಡಿಕೆ : ಗೊಂದಲ ನಿವಾರಣೆಗೆ ತುಂಗಭದ್ರ ರೈತ ಸಂಘ ಆಗ್ರಹ


ಬಳ್ಳಾರಿ : ಟಿಬಿ ಡ್ಯಾಂ ಕ್ರೆಸ್ಟ್‍ಗೇಟ್ ಅಳವಡಿಕೆ : ಗೊಂದಲ ನಿವಾರಣೆಗೆ ತುಂಗಭದ್ರ ರೈತ ಸಂಘ ಆಗ್ರಹ


ಬಳ್ಳಾರಿ, 30 ಮೇ (ಹಿ.ಸ.) :

ಆ್ಯಂಕರ್ : ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ರಾಜ್ಯಗಳ ರೈತರ ಜೀವನಾಡಿ ಆಗಿರುವ ತುಂಗಭದ್ರ ಜಲಾಶಯದ 33 ಕ್ರೆಸ್ಟ್‍ಗೇಟ್‍ಗಳ ಅಳವಡಿಕೆ ಕುರಿತು ಗೊಂದಲದ ಹೇಳಿಕೆಗಳನ್ನು ನೀಡುವ ಬದಲು, ನೀರಾವರಿ ತಜ್ಞರು, ವಿಷಯ ತಜ್ಞರು ಮತ್ತು ನಿವೃತ್ತ - ಹಾಲಿ ಅಧಿಕಾರಿಗಳ ತುರ್ತು ಸಭೆಯನ್ನು ನಡೆಸಿ, ಒಂದು ತಿಂಗಳು ಮುಂಚಿತವಾಗಿ ಮುಂಗಾರು ಬೆಳೆಗೆ ನೀರನ್ನು ಹರಿಸಿ - ರೈತರನ್ನು ಸಂರಕ್ಷಿಸಬೇಕು ಎಂದು ತುಂಗಭದ್ರ ರೈತ ಸಂಘದ ದರೂರು ಪುರುಷೋತ್ತಮ ಗೌಡ ಅವರು ಆಗ್ರಹಿಸಿದ್ದಾರೆ.

ಸುದ್ದಿಗಾರರ ಜೊತೆ ಶುಕ್ರವಾರ ಮಾತನಾಡಿದ ಅವರು, 1953ರಲ್ಲಿ ಅಳವಡಿಸಿರುವ 33 ಕ್ರೆಸ್ಟ್‍ಗೇಟುಗಳು ಹಾಳಾಗಿವೆ. ಹೆಚ್ಚಿನ ನೀರು ಸಂಗ್ರಹ ಮಾಡಲು ಜಲಾಶಯ ಅಸಮರ್ಥಗೊಂಡಿದೆ. ನೀರಾವರಿ ತಜ್ಞ ಕನ್ಹಯ್ಯ ಕುಮಾರ್ ಅವರು ಜಲಾಶಯಲದಲ್ಲಿ ಶೇ. 60 ರಿಂದ 70 ರಷ್ಟು ನೀರನ್ನು ಸಂಗ್ರಹ ಮಾಡಬಹುದಾಗಿದೆ ಎಂದು ಅಭಿಪ್ರಾಯ ನೀಡಿದ್ದಾರೆ. ಕಾರಣ ರೈತರು ಮೊದಲ ಮತ್ತು ಎರಡನೇ ಬೆಳೆಗೆ ನೀರು ಪಡೆಯುವ ಕುರಿತು ಆತಂಕದಲ್ಲಿದ್ದಾರೆ. ರೈತರಲ್ಲಿಯ ಆತಂಕವನ್ನು ನಿವಾರಣೆ ಮಾಡಲು ಒಂದು ತಿಂಗಳು ಅವಧಿಗೆ ಮೊದಲೇ ನೀರನ್ನು ಕಾಲುವೆಯಲ್ಲಿ ಹರಿಸಬೇಕು ಎಂದು ಅವರು ಆಗ್ರಹಿಸಿದರು.

ಒಂದು ಕ್ರೆಸ್ಟ್‍ಗೇಟ್ 20 ಅಡಿ ಎತ್ತರ, 60 ಅಡಿ ಅಗಲವಿದ್ದು, 48 ಟನ್ ತೂಕವಿರುತ್ತದೆ. ಒಂದು ಕ್ರೆಸ್ಟ್‍ಗೇಟ್‍ನ ಅಂದಾಜು ಬೆಲೆ 2 ಕೋಟಿ ರೂಪಾಯಿ ಆಗಲಿದೆ. ಒಂದು ಗೇಟನ್ನು ಸಿದ್ದಪಡಿಸಲು ಸಾಕಷ್ಟು ಕಾಲಾವಕಾಶದ ಅಗತ್ಯವಿದೆ. ಈ ಸತ್ಯಾಂಶವನ್ನು ಸರ್ಕಾರ ರೈತರಿಗೆ ತಿಳಿಸುತ್ತಿಲ್ಲ. ಈ ಭಾಗದ ರೈತರಿಗೆ ಬೆಳೆ ಇಲ್ಲದೇ ಹೋದಲ್ಲಿ ಈ ಭಾಗದ - ಮೂರು ರಾಜ್ಯಗಳ ಆರ್ಥಿಕತೆ ಹದಗೆಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬೆಂಗಳೂರಿನ ಜನಪ್ರತಿನಿಧಿಗಳಿಗೆ ಕಾವೇರಿ ಮಾತ್ರವೇ ನಾಡಿನ ಜೀವನಾಡಿ ಅಲ್ಲ, ತುಂಗಭದ್ರವೂ ಮೂರು ರಾಜ್ಯಗಳ ಜೀವನಾಡಿ ಎನ್ನುವ ಚಿಂತನೆ ಮೂಡಬೇಕು. ಇಲ್ಲವಾದಲ್ಲಿ ಈ ಭಾಗದ ರೈತರು ಸಂಕಷ್ಟಕ್ಕೆ ಈಡಾಗುವುದು ಖಚಿತ. ಸರ್ಕಾರ ಮತ್ತು ಜನಪ್ರತಿನಿಧಿಗಳು ಈ ಕುರಿತು ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಹಂತ ಹಂತವಾಗಿ ಹೋರಾಟಗಳನ್ನು ನಡೆಸುವುದಾಗಿ ಹೇಳಿದರು.

ರೈತ ಮುಖಂಡರುಗಳಾದ ಖಾಜಾ ವಲಿಸಾಬ್, ಮಲ್ಲಪ್ಪ, ಭೀಮನಗೌಡ, ದೊಡ್ಡಮಲ್ಲಪ್ಪ, ಹಚ್ಚೊಳ್ಳಿ ಸಿದ್ದಯ್ಯಸ್ವಾಮಿ, ಬಸವರಾಜಪ್ಪ, ಉಮೇಶಗೌಡ ಮಲ್ಲಾರಡ್ಡಿ, ಜಾಲಿಹಾಳ್ ಶ್ರೀಧರ್‍ಗೌಡ, ಪಂಪನಗೌಡ ಇನ್ನಿತರರು ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande