ನವದೆಹಲಿ, 28 ಮೇ (ಹಿ.ಸ.) :
ಆ್ಯಂಕರ್ : ಭಾರತೀಯ ಜನತಾ ಪಕ್ಷ ಇಂದು ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ್ ಸಾವರ್ಕರ್ ಅವರ ಜನ್ಮದಿನದ ಅಂಗವಾಗಿ ಗೌರವ ಸಲ್ಲಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಭಾರತ ಮಾತೆಯ ಧೈರ್ಯಶಾಲಿ ಪುತ್ರ, ಬಲಿಷ್ಠ ರಾಷ್ಟ್ರೀಯವಾದಿ ನಾಯಕ, ಪ್ರಭಾವಿ ವಾಗ್ಮಿ ಮತ್ತು ಸಮರ್ಪಿತ ಸಮಾಜ ಸುಧಾರಕ ಎಂದು ಹೇಳಿ ನಮನ ಸಲ್ಲಿಸಿದೆ.
ಇತಿಹಾಸದ ಪ್ರಕಾರ, 1905ರಲ್ಲಿ ಪುಣೆಯಲ್ಲಿ ವಿದೇಶಿ ಬಟ್ಟೆ ಸುಡುವ ಮೂಲಕ ಸಾವರ್ಕರ್ ಬ್ರಿಟಿಷ್ ವಿರೋಧದ ಪ್ರಥಮ ಚಟುವಟಿಕೆಗೆ ಚಾಲನೆ ನೀಡಿದ್ದರು. ಕ್ರಾಂತಿಕಾರಿತ್ವದ ಕಾರಣದಿಂದ ಬ್ರಿಟಿಷರು ಅವರಿಗೆ ಕಾಲಾ-ಪಾನಿ ಶಿಕ್ಷೆ ವಿಧಿಸಿ, ಅಂಡಮಾನ್ ಸೆಲ್ಯುಲಾರ್ ಜೈಲಿಗೆ ಕಳುಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa