ಮಾಸ್ಕೋ, 24 ಮೇ (ಹಿ.ಸ.) :
ಆ್ಯಂಕರ್ : ರಷ್ಯಾ ಭೇಟಿಯಲ್ಲಿರುವ ಭಾರತದ ಸರ್ವಪಕ್ಷ ಸಂಸದೀಯ ನಿಯೋಗದ ನಾಯಕಿ ಕನಿಮೋಳಿ, ಭಯೋತ್ಪಾದನೆ ವಿರುದ್ಧ ಭಾರತದ ದೃಢ ನಿಲುವನ್ನು ರಷ್ಯಾ ನಾಯಕರಿಗೆ ಪುನರುಚ್ಛರಿಸಿದರು. ರಾಜ್ಯ ಡುಮಾ ಅಧ್ಯಕ್ಷ ಲಿಯೊನಿಡ್ ಸ್ಲಟ್ಸ್ಕಿ, ಉಪಾಧ್ಯಕ್ಷ ಆಂಡ್ರೆ ಡೆನಿಸೊವ್ ಹಾಗೂ ಇತರರೊಂದಿಗೆ ಸಭೆ ನಡೆಸಿದ ಅವರು, ಪಹಲ್ಗಾಮ್ ದಾಳಿಯ ವಿವರಗಳನ್ನು ಹಂಚಿಕೊಂಡರು. ಭಾರತ-ರಷ್ಯಾ ನಡುವಿನ ಭದ್ರತಾ ಸಹಕಾರವನ್ನು ಬಲಪಡಿಸುವ ಆಶಯವನ್ನು ಅವರು ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa