

ಕೊಪ್ಪಳ, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಮಹಾದಾಸೋಹಕ್ಕಾಗಿ ಪ್ರತಿ ಅನೇಕ ಭಕ್ತಗಣ ವಿವಿಧ ರೀತಿಯ ದಾನ್ಯ, ತರಕಾರಿ, ಸಿಹಿ ತಿನಿಸು, ರೊಟ್ಟಿ ಮುಂತಾದ ದಾಸೋಹ ಸೇವೆಯನ್ನು ಮಹಾದಾಸೋಹಕ್ಕೆ ಸಲ್ಲಿಸುವುದು ಭಕ್ತರ ಸಂಪ್ರದಾಯ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಲಿಂಗಪೂರ ಗ್ರಾಮದ ಭಕ್ತರು ಈ ವರ್ಷದ ಜಾತ್ರಾ ಮಹಾದಾಸೋಹಕ್ಕೆ 60 ಕ್ವಿಂಟಾಲ್ ಬೆಲ್ಲವನ್ನು ಸಲ್ಲಿಸುತ್ತಿದ್ದಾರೆ. ಗ್ರಾಮದ ದಾನಿಗಳ ಸೇವೆಯನ್ನು ಶ್ರೀಗವಿಮಠವು ಸ್ಮರಿಸುತ್ತದೆ ಎಂದು ಶ್ರೀ ಗವಿಮಠದ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್