ದೆಹಲಿಯಲ್ಲಿ ಮಾಲಿನ್ಯ ತೀವ್ರ ಕುಸಿತ ; ಉದ್ಯೋಗಿಗಳಿಗೆ ಮನೆಯಿಂದ ಕೆಲಸಕ್ಕೆ ಸೂಚನೆ
ನವದೆಹಲಿ, 17 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಹಿನ್ನೆಲೆಯಲ್ಲಿ ಗ್ರೇಪ್–4 ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ಇದರ ಭಾಗವಾಗಿ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಗರಿಷ್ಠ ಶೇಕಡಾ 50 ಸಿಬ್ಬಂದಿಗೆ ಮಾತ್ರ ಕಚೇರಿ ಹಾಜರಾತಿ ಅನುಮತಿ ನೀಡಲಾಗಿದ್ದು, ಉಳಿದವ
Kapil mishra


ನವದೆಹಲಿ, 17 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಹಿನ್ನೆಲೆಯಲ್ಲಿ ಗ್ರೇಪ್–4 ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ಇದರ ಭಾಗವಾಗಿ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಗರಿಷ್ಠ ಶೇಕಡಾ 50 ಸಿಬ್ಬಂದಿಗೆ ಮಾತ್ರ ಕಚೇರಿ ಹಾಜರಾತಿ ಅನುಮತಿ ನೀಡಲಾಗಿದ್ದು, ಉಳಿದವರು ಮನೆಯಿಂದ ಕೆಲಸ ಮಾಡಬೇಕಾಗಿದೆ. ಸಂಚಾರದ ಒತ್ತಡ ಕಡಿಮೆ ಮಾಡಲು ಕೆಲಸದ ಸಮಯಗಳನ್ನು ಅನುಸರಿಸಲು ಸರ್ಕಾರ ಸೂಚಿಸಿದೆ.

ಮಾಲಿನ್ಯದಿಂದ ಹೆಚ್ಚು ಹಾನಿಗೊಳಗಾದ ದೈನಂದಿನ ಕೂಲಿ ನಿರ್ಮಾಣ ಕಾರ್ಮಿಕರಿಗೆ ಪರಿಹಾರವಾಗಿ, ದೆಹಲಿ ಸರ್ಕಾರವು ನೋಂದಾಯಿತ ಮತ್ತು ಪರಿಶೀಲಿತ ಕಾರ್ಮಿಕರಿಗೆ DBT ಮೂಲಕ ₹10,000 ಆರ್ಥಿಕ ಸಹಾಯ ನೀಡಲು ತೀರ್ಮಾನಿಸಿದೆ. ಗ್ರೇಪ್–3 ಅವಧಿಯಲ್ಲಿಯೂ 16 ದಿನಗಳ ನಿರ್ಮಾಣ ಸ್ಥಗಿತದಿಂದ ಕಾರ್ಮಿಕರಿಗೆ ನಷ್ಟವಾಗಿದೆ ಎಂದು ಸಚಿವ ಕಪಿಲ್ ಮಿಶ್ರಾ ತಿಳಿಸಿದರು.

ಸರ್ಕಾರದ ಪೋರ್ಟಲ್‌ನಲ್ಲಿ ನೋಂದಣಿ ಮುಂದುವರಿದಿದ್ದು, ಈಗಾಗಲೇ 10,000ಕ್ಕೂ ಹೆಚ್ಚು ಕಾರ್ಮಿಕರು ಹೆಸರು ನೋಂದಾಯಿಸಿದ್ದಾರೆ. ಅರ್ಹ ಎಲ್ಲಾ ನೋಂದಾಯಿತ ಕಾರ್ಮಿಕರಿಗೆ ಈ ಸಹಾಯ ಒದಗಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande