
ಕೋಲಾರ, ೧೫ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಜಿಲ್ಲೆಯ ಮಾಲೂರು ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನನ್ನು ಶಾಸಕರ ನೇತೃತ್ವದ ಭೂ ಸಕ್ರಮೀಕರಣ ಸಮಿತಿಯಲ್ಲಿ ಅಕ್ರಮವಾಗಿ ನಡವಳಿ ಕೈಗೊಂಡ ಪ್ರಕರಣದಲ್ಲಿ ಭಾಗಿಯಾಗಿರುವ ಮಾಲೂರು ತಾಲ್ಲೂಕು ಲಕ್ಕೂರು ರಾಜಸ್ವ ನಿರೀಕ್ಷಕ ಎಂ.ಕೆ.ಶ್ರೀಪತಿ, ಕೋಲಾರ ಕಂದಾಯ ನಿರೀಕ್ಷಕ ರಾಜೇಂದ್ರಪ್ರಸಾದ್, ಸೇರಿದಂತೆ ಒಟ್ಟು ೧೯ ಮಂದಿ ನೌಕರರಿಗೆ ವಾಗ್ದಂಡನೆ ವಿಧಿಸಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ. ಈ ನೌಕರರ ವಿರುದ್ದ ಕರ್ನಾಟಕ ನಾಗರೀಕ ಸೇವಾ ನಿಯಮಗಳು ೧೯೫೭ರ ನಿಯಮ ೯ ರಡಿ ಕೇವಲ ವಾಗ್ದಂಡನೆಗೆ ಸೀಮಿತ ಮಾಡಿರುವುದು ಈ ನೌಕರರ ರಕ್ಷಣೆಗೆ ಸರ್ಕಾರ ಮುಂದಾಗಿದೆಯೇ ಎಂಬ ಅನುಮಾನ ಮೂಡುವಂತೆ ಮಾಡಿದೆ.
ವಾಗ್ದಂಡನೆಗೆ ಒಳಗಾಗಿ ಹಿಂದೆ ಮಾಲೂರು ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರೆಂದರೆ ಕೋಲಾರ ಕಸಬಾ ರಾಜಸ್ವ ನಿರೀಕ್ಷಕ ರಾಜೇಂದ್ರಪ್ರಸಾದ್, ಬಂಗಾರಪೇಟೆ ತಾಲ್ಲೂಕು ಕಚೇರಿ ಪ್ರಥಮ ದರ್ಜೆ ಸಹಾಯಕ ಮಂಜುನಾಥ, ಕೆಜಿಎಫ್ ತಾಲ್ಲೂಕು ಆಹಾರ ನಿರೀಕ್ಷಕ ವಿ.ರಘು, ದಾವಣಗೆರೆ ಜಿಲ್ಲೆ ಹೊನ್ನಾಳಿಯ ಸಾಸ್ವೇಹಳ್ಳಿಯ ಗ್ರಾಮ ಆಡಳಿತಾಧಿಕಾರಿ ಹೆಚ್.ಉಮೇಶ್, ಬೂದಿಕೋಟೆ ರಾಜಸ್ವ ನಿರೀಕ್ಷಕ ಹೆಚ್.ಜಿ.ಪವನ್ ಕುಮಾರ್, ತಾಲ್ಲೂಕಿನ ವಕ್ಕಲೇರಿ ಮಂಗಸ0ದ್ರ ಗ್ರಾಮ ಆಡಳಿತಾಧಿಕಾರಿ ವಿನಯ್ ಜೆ, ತಾಲ್ಲೂಕಿನ ಆಲಹಳ್ಳಿ ಗ್ರಾಮ ಆಡಳಿತಾಧಿಕಾರಿ ಶಿವವಾನಂದಪಡಸಲಗಿ, ಕೆಜಿಎಫ್ ತಾಲ್ಲೂಕು ಆಹಾರ ನಿರೀಕ್ಷಕ ಎನ್.ಬಿ.ಕೃಷ್ಣಮೂರ್ತಿ ಪ್ರಮುಖರಾಗಿದ್ದಾರೆ.
ಉಳಿದಂತೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ಕಚೇರಿ ಶಿರಸ್ತೇದಾರ್ ಎಸ್.ಎಂ.ನಾರಾಯಣಸ್ವಾಮಿ, ಕೋಲಾರ ತಾಲೂಕಿನ ಅರಾಭಿಕೊತ್ತನೂರು ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಹೆಚ್.ಕೆ.ಅನಿತಾ, ಮಲೂರು ತಾಲ್ಲೂಕು ಲಕ್ಕೂರು ಹೋಬಳಿ ರಾಜಸ್ವ ನಿರೀಕ್ಷಕ ಎಂ.ಕೆ.ಶ್ರೀಪತಿ, ಇದೇ ತಾಲೂಕಿನ ಹುರುಳುಗೆರೆ ಗ್ರಾಮ ಆಡಳಿತಾಧಿಕಾರಿ ಎಸ್.ವೆಂಕಟೇಶ್, ಮಡಿವಾಳ ಕಂದಾಯ ವೃತ್ತ ಆಡಳಿತಾಧಿಕಾರಿ ಆರ್.ಲೋಕೇಶ್, ಚಲಗನಹಳ್ಳಿ ಕಂದಾಯ ವೃತ್ತದಗ್ರಾಮ ಆಡಳಿತಾಧಿಕಾರಿ ರಾಹುಲ್, ಯಶವಂತಪುರ ಕಂದಾಯ ವೃತ್ತದ ಆಡಳಿತಾಧಿಕಾರಿ ಆರ್.ಶರತ್, ಗುಂಡ್ಲಪಾಳ್ಯ ಕಂದಾಯ ವೃತ್ತದ ಆಡಳಿತಾಧಿಕಾರಿ ಸಿ.ವಿ.ಮುನೇಶ್, ಮಾಸ್ತಿ ರಾಜಸ್ವ ನಿರೀಕ್ಷಕ ಕೆ.ನಾರಾಯಣಸ್ವಾಮಿ, ದೊಡ್ಡಕಲ್ಲಹಳ್ಳಿ ಕಂದಾಯ ವೃತ್ತದ ಗ್ರಾಮ ಅಡಳಿತಾಧಿಕಾರಿ ನುತನ್ ಎ., ಹುಳದೇನಹಳ್ಳಿ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಎಂ.ಮಮತಾ ವಾಗ್ದಂಡನೆಗೆ ಒಳಗಾದ ನೌಕರರಾಗಿದ್ದಾರೆ.
ಈ ಹಿಂದೆ ಮಾಲೂರು ತಾಲ್ಲೂಕಿನ ತಹಸೀಲ್ದಾರ್ ಆಗಿದ್ದ ವಿ.ನಾಗರಾಜ್ ಇವರು ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ ೯೪ ರ ಅಡಿಯಲ್ಲಿ ಅಕ್ರಮ ಸಕ್ರಮ ಮಂಜೂರಾತಿ ಕೋರಿಕೆ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲನೆ ಮಾಡದೇ ಅನರ್ಹ ವ್ಯಕ್ತಿಗಲಿಗೆ ಭೂ ಮಂಜೂರಾತಿ ಮಾಡಿರುವ ಪ್ರಕರಣದಲ್ಲಿ ವಿಚಾರಣಾಧಿಕಾರಿಯಾಗಿದ್ದ ಕೋಲಾರ ಜಿಲ್ಲಾಧಿಕಾರಿಗಳು, ಸಲ್ಲಿಸಿರುವ ವರದಿಯಲ್ಲಿ ಭೂ ಮಂಜೂರಾತಿ ಸಮಿತಿ ಸದಸ್ಯ ಕಾರ್ಯದರ್ಶಿಯಾಗಿದ್ದ ತಾಹಸೀಲ್ದಾರ್ ನಾಗರಾಜ್ ಅವರು ಕರ್ತವ್ಯ ಲೋಪ ಎಸಗಿರುವುದನ್ನು ಪರಿಗಣಿಸಿ ಅದಕ್ಕನುಗುಣವಾಗಿ ಗರಿಷ್ಟ ದಂಸನೆ ವಿಧಿಸಬಹುದೆಂದು ಸರ್ಕಾರಕ್ಕೆ ಅಭಿಪ್ರಾಯ ಸಲ್ಲಿಸಲಾಗಿತ್ತು.
ಸದರಿ ವರದಿಯಲ್ಲಿ ಈ ಸಂಬAಧ ಈಗ ವಾಗ್ದಂಡನೆಗೆ ಒಳಗಾಗಿರುವ ಅಧಿಕಾರಿ,ನೌಕರರು, ಕರ್ತವ್ಯ ಲೋಪದಲ್ಲಿ ಸಮಭಾಗಿಗಳಾಗಿರುವುದಾಗಿ ಅಭಿಪ್ರಾಯಪಟ್ಟು ಅವರ ವಿರುದ್ದವೂ ಶಿಸ್ತು ಕ್ರಮ ಜರುಗಿಸುವುದು ಅಗತ್ಯವಾಗಿದೆ ಎಂದು ತಿಳಿಸಲಾಗಿದ್ದು, ಅದರಂತೆ ಈ ಕ್ರಮ ವಾಗಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವ್ಯಾಪ್ತಿಯ ವಿವಿಧ ಗ್ರಾಮಗಳ ೬೦ ಪ್ರಕರಣಗಳಲ್ಲಿ ಮಾಲೂರು ತಾಲ್ಲೂಕು ಬಗರ್ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಲ್ಲಿ ಮಂಜೂರಾತಿಗಾಗಿ ನಮೂನೆ-೫೭ ರಲ್ಲಿದಾಖಲಾದ ಅರ್ಜಿಗಳಿಗೆ ಸಂಬAಧಿಸಿದAತೆ ಸರ್ಕಾರಿ ಗೋಮಾಳ ಜಮೀನನ್ನು ಅನರ್ಹರಿಗೆ ಮಂಜೂರು ಮಾಡಲು ಸಮಿತಿ ನಿರ್ಣಯ ಕೈಗೊಂಡಿದೆ ಎಂದು ಆರೋಪಿಸಲಾಗಿತ್ತು.
ಈ ಸಂಬ0ಧ ಬಂದ ದೂರುಗಳ ಅನ್ವಯ ಕೋಲಾರ ಉಪವಿಭಾಗಾಧಿಕಾರಿಗಳು ಕರ್ನಾಟಕ ಭೂ ಕಂದಾಯ ನಿಯಮಗಳು ೧೯೬೬ ನಿಯಮ ೧೦೮(ಕೆ) ಅಡಿಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿ ಬಗರ್ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಮಿತಿ ನಿರ್ಣಯ ರದ್ದುಗೊಳಿಸಿ ಈ ನವಕರರ ವಿರುದ್ದ ಕ್ರಮ ಕೈಗೊಳ್ಳಲು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಆರೋಪಿಗಳ ಪೈಕಿ ಮಾಲೂರು ತಾಲ್ಲೂಕಿನ ರಾಜೇನಹಳ್ಳಿ ಗ್ರಾಮ ಆಡಳಿತಾಧಿಕಾರಿ ಬಸವರಾಜ ನರೇಗಲ್ ಮೃತಪಟ್ಟಿದ್ದು, ಹುಣಸಿಕೋಟೆ ಕಂದಾಯ ವೃತ್ತದ ಅಧಿಕರಿ ಜೆ.ಗುರುದತ್ ರಾಜೀನಾಮೆ ನೀಡಿದ್ದಾರೆ. ಇವರನ್ನು ಹೊರತುಪಡಿಸಿ ೧೯ ಮಂದಿ ವಿರುದ್ದ ವಾಗ್ದಂಡನೆ ವಿಧಿಸಿದ್ದು, ಆಪಾದಿತ ನೌಕರರು ಭೂಮಂಜೂರಿ ಕೋರಿದ ಅರ್ಜಿದಾರರು ಹೊಂದಿರಬೇಕಾದ ಅರ್ಹತೆ, ಮಾನದಂಡಗಳನ್ನು ಪರಿಶೀಲದಿರುವುದು, ನಿಯಮ ಅನುಸರಿಸದಿರುವುದು ವ್ಯಕ್ತವಾಗಿದೆ ಎಂದು ತಿಳಿಸಿ ಕ್ರಮ ಕೈಗೊಳ್ಳಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್