
ಬಳ್ಳಾರಿ, 10 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಅವರು ಡಿಸೆಂಬರ್ 14 ರ ಭಾನುವಾರ ಬಳ್ಳಾರಿ ಜಿಲ್ಲೆಯ ಕುರುಗೋಡುಗೆ ಭೇಟಿ ನೀಡಲಿದ್ದಾರೆ.
ಅಂದು ಬೆಳಿಗ್ಗೆ 09.50 ಗಂಟೆಗೆ ಬೆಂಗಳೂರಿನಿಂದ ಹೊರಟು, ಬೆಳಿಗ್ಗೆ 10.40 ಕ್ಕೆ ಸಂಡೂರಿನ ತೋರಣಗಲ್ಲಿನ ಜಿಂದಾಲ್ ಏರ್ಪೋರ್ಟ್ ಗೆ ಆಗಮಿಸಿ, ಜಿಂದಾಲ್ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಮಾಡುವರು.
ಬಳಿಕ ಮಧ್ಯಾಹ್ನ 03 ಗಂಟೆಗೆ ಅಲ್ಲಿಂದ ಹೊರಟು ಸಂಜೆ 04 ಗಂಟೆಗೆ ಕುರುಗೋಡು ಪಟ್ಟಣಕ್ಕೆ ಆಗಮಿಸಿ, ಪಟ್ಟಣದಲ್ಲಿ ಏರ್ಪಡಿಸಿರುವ 4ನೇ ಉರ್ಸ್-ಎ-ಷರೀಫ್ ಹಜರತ್ ಖ್ವಾಜಾ ಸೈಯದ್ ಶಾ ಸಾಹಿಬ್ ಪೀರ್ ಥೇರ್ ಉರ್ಸ್-ಎ ಷರೀಫ್ನಲ್ಲಿ ಪಾಲ್ಗೊಳ್ಳಲಿದ್ದಾರೆ.
ನಂತರ ಸಂಜೆ 05 ಗಂಟೆಗೆ ಧಾರವಾಡಕ್ಕೆ ಪ್ರಯಾಣಿಸುವರು ಎಂದು ಆಪ್ತ ಕಾರ್ಯದರ್ಶಿಯವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್