ಆರ್ಥಿಕ ಬೆಳವಣಿಗೆಗೆ ಯುವಜನತೆ ವ್ಯಾಪಾರದಲ್ಲಿ ಭಾಗವಹಿಸಬೇಕು : ಎಸ್.ವಿ.ಡಾಣಿ
ಕೊಪ್ಪಳ, 22 ನವೆಂಬರ್ (ಹಿ.ಸ.) : ಆ್ಯಂಕರ್ : ಯುವಪೀಳಿಗೆಗೆ ಕೌಶಲ್ಯ ತರಬೇತಿ ಮತ್ತು ಅಭಿವೃದ್ಧಿ ಯೋಜನೆಗಳು ಜಾರಿ ಆಗಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವರಾದ ಡಾ. ಎಸ್.ವಿ. ಡಾಣಿ ಅವರು ತಿಳಿಸಿದ್ದಾರೆ. ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ವಾಣಿಜ
ಆರ್ಥಿಕ ಬೆಳವಣಿಗೆಗೆ ಯುವಜನತೆ ವ್ಯಾಪಾರದಲ್ಲಿ ಭಾಗವಹಿಸಬೇಕು: ಎಸ್.ವಿ.ಡಾಣಿ


ಆರ್ಥಿಕ ಬೆಳವಣಿಗೆಗೆ ಯುವಜನತೆ ವ್ಯಾಪಾರದಲ್ಲಿ ಭಾಗವಹಿಸಬೇಕು: ಎಸ್.ವಿ.ಡಾಣಿ


ಕೊಪ್ಪಳ, 22 ನವೆಂಬರ್ (ಹಿ.ಸ.) :

ಆ್ಯಂಕರ್ : ಯುವಪೀಳಿಗೆಗೆ ಕೌಶಲ್ಯ ತರಬೇತಿ ಮತ್ತು ಅಭಿವೃದ್ಧಿ ಯೋಜನೆಗಳು ಜಾರಿ ಆಗಬೇಕು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಪ್ರಭಾರಿ ಕುಲಸಚಿವರಾದ ಡಾ. ಎಸ್.ವಿ. ಡಾಣಿ ಅವರು ತಿಳಿಸಿದ್ದಾರೆ.

ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗ ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಪೀಳಿಗೆಯು ವೃತ್ತಿ ಕೌಶಲ್ಯವನ್ನು ಪಡೆಯಬೇಕು. ಭಾಷಾ ಪ್ರೌಢಿಮೆಯನ್ನು ಅಳವಡಿಸಿಕೊಳ್ಳಬೇಕಲು ಎಂದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಡಾ. ಸಿ.ಐ. ಛಲವಾದಿ ಅವರು, ಸುರಕ್ಷಿತವಾಗಿ ಬದುಕಲು ಪರಿಸರ ಮತ್ತು ಸಮಾಜದ ರಕ್ಷೆಣೆಗೆ ವ್ಯಾಪಾರವು ಪೂರಕ

ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದರು.

ಕಾಲೇಜಿನ ಪ್ರಾಚಾರ್ಯರಾದ ಡಾ. ಚನ್ನಬಸವ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಸಂಯೋಜಕರಾದ ಡಾ. ಕರಿಬಸವೇಶ್ವರ ಅವರು ಪ್ರಾಸ್ತಾವಿಕ ಭಾಷಣ ಮಾಡಿ, ಸ್ವಾಗತ ಕೋರಿ, ಕಾರ್ಯಕ್ರಮ ನಿರೂಪಿಸಿದರು. ಕು. ಪ್ರಜ್ಞಾ ಪ್ರಾರ್ಥನೆ ಸಲ್ಲಿಸಿದರು. ಡಾ. ಜಾಲಿಹಾಳ ಶರಣಪ್ಪ ಅವರು ವಂದನಾರ್ಪಣೆ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande