
ಬಳ್ಳಾರಿ, 17 ನವೆಂಬರ್ (ಹಿ.ಸ.)
ಆ್ಯಂಕರ್: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಬಳ್ಳಾರಿ ಜಿಲ್ಲೆಯ ವಿಕಲಚೇತನರಿಗೆ ನ.25 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಕ್ರೀಡಾ ಮೈದಾನದಲ್ಲ್ಲಿ “ವಿಕಲಚೇತನರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಫರ್ಧೆಗಳಲ್ಲಿ ಭಾಗವಹಿಸುವಂತಹ ವಿಕಲಚೇತನರು ತಮ್ಮ ಹೆಸರನ್ನು ಆಯಾ ತಾಲ್ಲೂಕಿನ ಎಮ್ಆರ್ಡಬ್ಲೂö್ಯಗಳ ಬಳಿ ನೋಂದಾಯಿಸಿಕೊಳ್ಳಬೇಕು. ಯುಡಿಐಡಿ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ತರಬೇಕು.
*ಕ್ರೀಡೆಗಳ ವಿವರ:*
ದೈಹಿಕ ಅಂಗವಿಕಲರಿಗೆ: ಗುಂಡು ಎಸೆತ, ಜಾವೆಲಿನ್ ಥ್ರೋ, ಬೈಕ್ ರೇಸ್, ಬೋಥ್ ಲೆಗ್ ಗುಂಡು ಎಸೆತ.
ಅಂಧರಿಗೆ: ಕೇನ್ ರೇಸ್, ಗುಂಡು ಎಸೆತ.
ಶ್ರವಣದೋಷವುಳ್ಳವರಿಗೆ: 100 ಮೀ. ಓಟ, ಗುಂಡು ಎಸೆತ.
ಬುದ್ಧಿಮಾಂದ್ಯ: ಮ್ಯೂಜಿಕಲ್ ಚೇರ್, ಚೆಂಡು ಎಸೆತ.
ಕುಬ್ಜರಿಗೆ: ಗುಂಡು ಎಸೆತ.
*ಸಾಂಸ್ಕೃತಿಕ ಸ್ಪರ್ಧೆ:*
ಶ್ರವಣದೋಷವುಳ್ಳ ಮಕ್ಕಳಿಗೆ: ಚಿತ್ರಕಲಾ ಸ್ಪರ್ಧೆ.
ದೈಹಿಕ ಅಂಗವಿಕಲರಿಗೆ: ಜಾನಪದ ಗೀತೆ, ಭಾವಗೀತೆ.
ಬುದ್ಧಿಮಾಂದ್ಯ ಮಕ್ಕಳಿಗೆ: ಫ್ಯಾನ್ಸಿ ಡ್ರೆಸ್ಸ್ (ವೇಷ ಭೂಷಣ).
ದೃಷ್ಠಿದೋಷವುಳ್ಳವರಿಗೆ: ಜಾನಪದ ಗೀತೆ, ಭಾವಗೀತೆ.
ವಯಸ್ಕರಿಗೆ: ದೈಹಿಕ ಮತ್ತು ಅಂಧ ವಿಕಲಚೇತನರ ಕ್ರಿಕೇಟ್.
ಹೆಚ್ಚಿನ ಮಾಹಿತಿಗಾಗಿ ನಗರದ ಕಂಟೋನ್ಮೆಂಟ್ ನ ಶಾಂತಿಧಾಮ ಆವರಣದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯ ದೂ.08392-267886, ಯೋಜನಾ ಸಹಾಯಕ ಚಿದಾನಂದ.ಜಿ(ಮೊ.9972813152), ಬಳ್ಳಾರಿ ಹಾಗೂ ಕಂಪ್ಲಿ ಎಮ್ಆರ್ಡಬ್ಲೂ÷ರಾಣಿ(ಮೊ.8880875620), ಸಿರುಗುಪ್ಪ ಎಮ್ಆರ್ಡಬ್ಲೂ÷ಸಾಬೇಶ್(ಮೊ.9743509698), ಸಂಡೂರು ಎಮ್ಆರ್ಡಬ್ಲೂಕರಿಬಸಜ್ಜ(ಮೊ.9632052270), ಕುರುಗೋಡು ಎಮ್ಆರ್ಡಬ್ಲೂö್ಯ ರೇವಣ್ಣ (ಮೊ.9538000887) ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಗೋವಿಂದಪ್ಪ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್