
ಗದಗ, 17 ನವೆಂಬರ್ (ಹಿ.ಸ.)
ಆ್ಯಂಕರ್:
ಗದಗಜಿಲ್ಲೆಯ ಪತ್ರಕರ್ತರ ಸಂಘವು ರಚನಾತ್ಮಕ ಕೆಲಸ ಮಾಡುವ ಮೂಲಕ ರಾಜ್ಯದ ಪತ್ರಕರ್ತರಿಗೆ ಮಾದರಿಯಾಗುವಂತೆ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಸಲಹೆ ನೀಡಿದರು.
ನಗರದ ಮುಳಗುಂದ ರಸ್ತೆಯಲ್ಲಿರುವ ಪತ್ರಿಕಾ ಭವನದಲ್ಲಿ ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ 2025-28ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೈಜವಾಗಿ ಪ್ರತಿ ಬಿಂಬಿಸುವ ಕೆಲಸವನ್ನು ಯುವ ಪತ್ರಕರ್ತರು ಮಾಡಬೇಕು. ಜನ ಜಾಗೃತಿಗಾಗಿ ಪತ್ರಿಕೋದ್ಯಮ ಆರಂಭವಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಜನರ ಜಾಗೃತಿ ಮೂಡಿಸುವ ಕೆಲಸವು ಪತ್ರಿಕೋದ್ಯಮದಲ್ಲಿ ಉಳಿದಿಲ್ಲ. ನೈಜ ಸಮಾಜವನ್ನು ಪ್ರತಿನಿಧಿಸುವ ಕೆಲಸವನ್ನು ಮಾಡಬೇಕು. ಆದರಿಂದ ಯುವ ಪತ್ರಕರ್ತರು ನೈಜ ಸಮಾಜದ ಚಿತ್ರಣ ಮಾಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಭಾಷೆಯ ಕೊರತೆ ನೀಗಿಸುವ ಕೆಲಸವನ್ನು ಎಐ ಕ್ಷಣಾರ್ಧದಲ್ಲಿ ನೀಗಿಸುತ್ತದೆ. ಎಐ ಉಪಯೋಗ ಮಾಡುವ ಕುರಿತು ಅಧ್ಯಯನ ಮಾಡಲು ಮುಂದಾಗಬೇಕು. ಮೂರು ದಿನಗಳ ಕಾಲ ಎಐ ತರಬೇತಿ ಪಡೆಯಬೇಕು. ಇದರಿಂದ ನಿಮ್ಮ ಭಾಷೆ ಸಾಕಷ್ಟು ಪ್ರಮಾಣದಲ್ಲಿ ಬಲಿಷ್ಠ ವಾಗುತ್ತದೆ. ಉತ್ತಮವಾದ ಲೇಖನ ಹಾಗೂ ಉತ್ತಮ ಪ್ರಶ್ನೆ ಕೇಳಲು ಅನೂಕೂಲವಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ರಾಜ್ಯ ಮಟ್ಟದ ಗೌರವ ನೀಡುವ ಕೆಲಸವನ್ನು ರಾಜ್ಯ ಸರಕಾರ ಮುಂದಿನ ದಿನಗಳಲ್ಲಿ
ಮಾಡಲಾಗುತ್ತದೆ. ಹಿರಿಯ ಪತ್ರಕರ್ತರಿಗೆ ಪಿಂಚಣಿ ನೀಡುವ ಕೆಲಸವನ್ನು ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಇರುವ ಹಿರಿಯ ಪತ್ರಕರ್ತರ ಮಾಹಿತಿ ನೀಡಿದರೆ ಅವುಗಳನ್ನು ಕೊಡಿಸುವ ಕೆಲಸವನ್ನು ಮಾಡಲಾಗುತ್ತದೆ. ಸರಕಾರ ಮಟ್ಟದಲ್ಲಿ ಆಗುವ ಕೆಲಸ ವನ್ನು ಎರಡು ವರ್ಷಗಳ ಲ್ಲಿ ಮಾಡಲಾಗುತ್ತದೆ. ಅವುಗಳ ಪಟ್ಟಿ ಮಾಡಿ ಅವುಗಳ ನ್ನು ಹಂತ ಹಂತವಾಗಿ ಮಾಡುವ ಕೆಲಸ ಮಾಡೋಣ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ರಾಜ್ಯ ದೇಶದ ಪ್ರಗತಿಯಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾಗಿದೆ. ಆದರಿಂದ ಪತ್ರಕರ್ತರು ಜವಾಬ್ದಾರಿಯಿಂದ ಕೆಲಸವನ್ನು ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸಮಸ್ಯೆಗಳ ಕುರಿತು ವರದಿ ಮಾಡಬೇಕು. ರಾಜ್ಯ ಸರಕಾರಕ್ಕೆ ಮುಟ್ಟಿಸುವ ಕೆಲಸ ಪತ್ರಕರ್ತರು ಮಾಡಬೇಕು. ವಸ್ತು ನಿಷ್ಟ ವರದಿ ಮಾಡುವ ಕೆಲಸವನ್ನು ಮಾಡಬೇಕು. ಮೂರು ವರ್ಷಗಳ ಕಾಲ ರೂಪಿಸುವ ಯೋಜನೆ ರಾಜ್ಯಕ್ಕೆ ಮಾದರಿ ಆಗುವ ಕೆಲಸ ಮಾಡಬೇಕು. ಅದಕ್ಕೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಕೈ ಜೋಡಿಸಬೇಕು. ಪತ್ರಕರ್ತರು ತಮ್ಮ ಜವಾಬ್ದಾರಿಗಳ ಜತೆಗೆ ಕುಟುಂಬದ ಕಾಳಜಿ ವಹಿಸಬೇಕು. ಅದರಲ್ಲೂ ಮಕ್ಕಳ ಗುಣಮಟ್ಟದ ಶಿಕ್ಷಣ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪತ್ರಕರ್ತರ ಮಕ್ಕಳು ಸಹ ಉನ್ನತ ಹುದ್ದೆಗೆ ಹೋಗುವ ಕೆಲಸವನ್ನು ಮಾಡಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು.
ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ರಂಗಕ್ಕೆ ತನ್ನದೇ ಆದ ಜವಾಬ್ದಾರಿ ಇರುತ್ತದೆ. ಪತ್ರಕರ್ತರ ಹಾಕಿರುವ ಯೋಜನೆಗಳನ್ನು ಜಾರಿಗೆ ತರುವ ಕೆಲಸವನ್ನು ಮಾಡುವೆ ಎಂದರು.
ಹಿರಿಯ ಪತ್ರಕರ್ತ ಜಗದೀಶ್ ಕುಲಕರ್ಣಿ ಮಾತನಾಡಿ, ಜಿಲ್ಲೆಯೂ ಪತ್ರಿಕಾ ರಂಗದಲ್ಲಿ ತನ್ನದೇ ಆದ ವೈಶಿಷ್ಟ್ಯವಾದ ಕೊಡುಗೆ ನೀಡಿದೆ. ಮುಂಬರುವ ದಿನಗಳಲ್ಲಿ ಮೊದಲ ಮಹಡಿಯ ಮೇಲೆ ಕೊಢಡಿ ನಿರ್ಮಾಣ ಮಾಡುವ ಮೂಲಕ ತಾಲೂಕಿನ ಪತ್ರಕರ್ತರಿಗೆ ಅನೂಕುಲವಾಗುತ್ತದೆ ಎಂದರು.
ಹಿರಿಯ ಪತ್ರಕರ್ತ ಅನಂತ ಕಾರ್ಕಳ ಮಾತನಾಡಿ, ಬೆರಳು ಎಣಿಕೆ ಸದಸ್ಯರು ಸೇರಿಕೊಂಡು ಜಿಲ್ಲೆಯಲ್ಲಿ ಪತ್ರಕರ್ತರ ಸಂಘವನ್ನು ಆರಂಭಿಸಿದ ಸಂಘವು ಇಂದು ದೊಡ್ಡ ಪ್ರಮಾಣದಲ್ಲಿ ಸದಸ್ಯರನ್ನು ಒಳಗೊಂಡಿದೆ ಎಂದರು.
ರಾಜು ಹೆಬ್ಬಳ್ಳಿ ಮಾತನಾಡಿ, ಹಿರಿಯ ಪತ್ರಕರ್ತರಿಗೆ ಗೌರವ ನೀಡುವ ಕೆಲಸವನ್ನು ಮಾಡಲಾಗುತ್ತದೆ. ಪತ್ರಿಕಾ ವಿತರಕರಿಗೆ ನಿವೇಶನ ನೀಡುವ ಕೆಲಸವನ್ನು ಮಾಡಬೇಕು ಎಂದರು.
ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಹಿರೇಮಠ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚವಡಿ, ಹಿರಿಯ ಪತ್ರಕರ್ತರಾದ ಡಾ.ಅನಂತ ಕಾರ್ಕಳ, ಬಸವರಾಜ ದಂಡಿನ, ಎಸ್.ವಿ. ಶಿವಪ್ಪಯ್ಯನಮಠ, ಆನಂದ ಸಾಲಿಗ್ರಾಮ, ಎಂ.ಜಿ.ಕುಲಕರ್ಣಿ, ಐ.ಕೆ.ಕಮ್ಮಾರ, ವಸಂತ ಮಹೇಂದ್ರಕರ, ಸಿ.ಬಿ. ಸುಬೇದಾರ,, ವೀರಯ್ಯ ಲಕ್ಕುಂಡಿಮಠ, ಸಿ.ಕೆ. ಗಣಪ್ಪನವರ, ಅಶೋಕ ಸೊರಟೂರ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಅರುಣಕುಮಾರ ಹಿರೇಮಠ, ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ, ಉಪಾಧ್ಯಕ್ಷ ಅನೀಲ ತೆಂಬದಮನಿ, ಉಪಾಧ್ಯಕ್ಷ ಪ್ರಭುಸ್ವಾಮಿ ಅರವಟಗಿಮಠ, ಉಪಾಧ್ಯಕ್ಷ ವಿ.ಡಿ. ಕಣವಿ, ಕಾರ್ಯದರ್ಶಿ ಸಂಗಪ್ಪ ವ್ಯಾಪಾರಿ, ಕಾರ್ಯದರ್ಶಿ ಬನೇಶ ಕುಲಕರ್ಣಿ, ಕಾರ್ಯದರ್ಶಿ ಚಂದ್ರಶೇಖರ ಕುಸ್ಲಾಪೂರ, ಖಜಾಂಚಿ ರಾಮಣ್ಣ ವಗ್ಗಿ, ಜಿಲ್ಲಾ ಕಾರ್ಯಾಕಾರಿಣಿ ಸದಸ್ಯರಾದ ವೆಂಕಟೇಶ ಇಮರಾಪೂರ, ರುದ್ರಗೌಡ ಪಾಟೀಲ, ಸಂತೋಷ ಮುರಡಿ, ಆದರ್ಶ ಕುಲಕರ್ಣಿ, ಮಲ್ಲು ಕಳಸಾಪೂರ, ಶಿವಕುಮಾರ ಶಶಿಮಠ, ಮಹಾಲಿಂಗಯ್ಯ ಹಿರೇಮಠ, ಮಂಜುನಾಥ ಪತ್ತಾರ, ಗಿರೀಶ ಕಮ್ಮಾರ, ಮೌನೇಶ ಬಡಿಗೇರ, ಅಜಿತಕುಮಾರ ಹೊಂಬಾಳಿ, ಸಂತೋಷ ಕೊಣ್ಣೂರ, ಆನಂದಯ್ಯ ವಿರಕ್ತಮಠ, ಯಲ್ಲಪ್ಪ ತಳವಾರ, ವಿವಿಧ ತಾಲೂಕಿನ ಪತ್ರಕರ್ತರು ಇದ್ದರು. ಖಾಜಹುಸೇನ್ ಮುಧೋಳ ಪ್ರಾರ್ಥಿಸಿದರು.
ಬಾಹುಬಲಿ ಜೈನರ್ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡದು ವಂದಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP