
ಕೊಪ್ಪಳ, 17 ನವೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳದ ಕಿನ್ಹ್ನಾಳ ರಸ್ತೆಯ ಪ್ರಗತಿ ನಗರದದಲ್ಲಿ ಇರುವ ವರಸಿದ್ಧಿ ವಿನಾಯಕ ಬಲಮುರಿ ದೇವಸ್ಥಾನದ 10 ನೇ ವರ್ಷದ ಕಾರ್ತಿಕೋತ್ಸವವು ಮಂಗಳವಾರ ನೆರವೇರಲಿದೆ.
ಕಾರ್ತಿಕೋತ್ಸವಕ್ಕೆ ಕಲ್ಯಾಣ ನಗರ, ಚೆನ್ನಬಸವ ನಗರ, ಗಣೇಶ ತೆಗ್ಗು, ಜೆ.ಹೆಚ್. ಪಟೇಲ್ ನಗರ, ರಾಮಚಂದ್ರಪ್ಪ ಪೊಲೀಸ್ ಕಾಲೋನಿ, ಎನ್.ಜಿ.ಓ ಕಾಲೋನಿ, ಶಾಂತಿನಿಕೇತನ ಬಡಾವಣೆ, ಟೀಚರ್ಸ್ ಕಾಲೋನಿ, ಸೇರಿದಂತೆ ಕೊಪ್ಪಳ ಭಾಗ್ಯನಗರದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ಪ್ರಕಟಣೆಯಲ್ಲಿ ವರಸಿದ್ಧಿ ವಿನಾಯಕ ಸೇವಾ ಸಮಿತಿಯ ಗಿರೀಶ ಕಣವಿ, ಮಂಜುನಾಥ ಸಾಲಿಮಠ, ಶಿವಶಾಂತವೀರ ಕುರಗೋಡ, ವಾಸುದೇವ ಅಡವಿಭಾವಿ, ನಾಗರಾಜನಾಯಕ ಡೊಳ್ಳಿನ, ಗೋಪಾಲಕೃಷ್ಣ ದೇಸಾಯಿ, ವಿಶ್ವನಾಥ ಸಿದ್ಧಾಂತಿ, ಪ್ರಶಾಂತ ದಿವಟರ ತಿಳಿಸಿದ್ದಾರೆ. ಭಕ್ತಾಧಿಗಳ ಸಂಪರ್ಕಕ್ಕಾಗಿ 9741426565, 9900831176.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್