
ಸಂಡೂರು, 10 ನವೆಂಬರ್ (ಹಿ.ಸ.) :
ಆ್ಯಂಕರ್ : ಲಿಂಗಾಪುರ 220 ಕೆವಿ ಎಸ್.ಆರ್.ಎಸ್ ವಿದ್ಯುತ್ ವಿತರಣಾ ಕೇಂದ್ರದ ವಿದ್ಯತ್ ವಾಹಕದ ಉನ್ನತ್ತಿಕರಣ, ರಾಯರ ಕೆರೆಯ ಟವರ್ ಲೈನ್ನ ಮಾರ್ಗದ ವಿದ್ಯುತ್ ವಾಹಕ ಎಳೆಯುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ನಾಳೆ ಮಧ್ಯಾಹ್ನ 12 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
110ಕೆವಿ ಮುನಿರಬಾದ-ದೋಣಿಮಲೈ ಲೈನ್ನ ಮಾರ್ಗಮುಕ್ತತೆ ಕೋರಿರುವ ಕಾರಣ, ದೋಣಿಮಲೈ 110/33/11ಕೆವಿ ವಿದ್ಯುತ್ ವಿತರಣಾ ಕೇಂದ್ರ ಮತ್ತು ಸಂಡೂರು 33/11ಕೆವಿ ವಿದ್ಯುತ್ ವಿತರಣಾ ಕೇಂದ್ರಗಳ ವ್ಯಾಪ್ತಿಗೆ ಒಳಪಡುವ ಸಂಡೂರು ಪಟ್ಟಣ, ಕೃಷ್ಣನಗರ, ಸುಶೀಲಾನಗರ, ಯಶವಂತನಗರ, ಸೀನ್ ಬಸಪ್ಪ ಕ್ಯಾಂಪ್, ನಂದಿಹಳ್ಳಿ, ಕಮತೂರು, ನಾರಾಯಣಪುರ, ರಣಜಿತ್ಪುರ, ಭುಜಂಗನಗರ, ದೇವಗಿರಿ ಮತ್ತು ನರಸಿಂಗಾಪುರ ಗ್ರಾಮಪಂಚಾಯತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ಎನ್.ಜೆ.ವೈ ಮತ್ತು ಐಪಿಸೆಟ್ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್