ಕೊಪ್ಪಳ : ಮತಗಳ್ಳತನ, ಮಹಿಳಾ ಕಾಂಗ್ರೆಸ್ ಸಹಿ ಅಭಿಯಾನ
ಕೊಪ್ಪಳ, 10 ನವೆಂಬರ್ (ಹಿ.ಸ.) : ಆ್ಯಂಕರ್ : ದೇಶದ ಜನರು ತೀವ್ರಗತಿಯಲ್ಲಿ ಬದಲಾವಣೆ ಕಾಣುತ್ತಿದ್ದು ಮೋಸ ಮತ್ತು ನಯವಂಚಕತನಗಳಿಂದ ಬದಲಾವಣೆ ನಿಶ್ಚಿತ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಆಶಯ ವ್ಯಕ್ತಪಡಿಸಿದ್ದಾರೆ. ಮಹಿಳಾ ಕಾಂಗ್ರೆಸ್ ಮೂಲಕ ಬಿಜೆಪಿ, ಕೇಂದ್ರ
ಕೊಪ್ಪಳ : ಮತಗಳ್ಳತನ : ಮಹಿಳಾ ಕಾಂಗ್ರೆಸ್ ಸಹಿ ಅಭಿಯಾನ : ಜ್ಯೋತಿ ಆಶಯ


ಕೊಪ್ಪಳ : ಮತಗಳ್ಳತನ : ಮಹಿಳಾ ಕಾಂಗ್ರೆಸ್ ಸಹಿ ಅಭಿಯಾನ : ಜ್ಯೋತಿ ಆಶಯ


ಕೊಪ್ಪಳ : ಮತಗಳ್ಳತನ : ಮಹಿಳಾ ಕಾಂಗ್ರೆಸ್ ಸಹಿ ಅಭಿಯಾನ : ಜ್ಯೋತಿ ಆಶಯ


ಕೊಪ್ಪಳ, 10 ನವೆಂಬರ್ (ಹಿ.ಸ.) :

ಆ್ಯಂಕರ್ : ದೇಶದ ಜನರು ತೀವ್ರಗತಿಯಲ್ಲಿ ಬದಲಾವಣೆ ಕಾಣುತ್ತಿದ್ದು ಮೋಸ ಮತ್ತು ನಯವಂಚಕತನಗಳಿಂದ ಬದಲಾವಣೆ ನಿಶ್ಚಿತ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಆಶಯ ವ್ಯಕ್ತಪಡಿಸಿದ್ದಾರೆ.

ಮಹಿಳಾ ಕಾಂಗ್ರೆಸ್ ಮೂಲಕ ಬಿಜೆಪಿ, ಕೇಂದ್ರ ಸರಕಾರ ಹಾಗೂ ಚುನಾವಣೆ ಆಯೋಗದ ಮತಗಳ್ಳತನ ವಿರುದ್ಧ ಆರಂಭಿಸಿರುವ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಸೋಮವಾರ ಸಹಿ ಮಾಡಿ ಅಭಿಯಾನಕ್ಕೆ ಚಾಲನೆ ನೀಡಿದರು.

ಮದುವೆ ಮನೆಯೂ ಸೇರಿದಂತೆ ಅನೇಕ ವಾರ್ಡುಗಳಲ್ಲಿ ಜನರನ್ನು ಗುಂಪು ಗುಂಪಾಗಿ ನಿಲ್ಲಿಸಿಕೊಂಡು ಮತಗಳ್ಳತನ ಮತ್ತು ಅದರ ಮೂಲಕ ಮಾಡಲಾಗುತ್ತಿರುವ ಅನ್ಯಾಯದ ಬಗ್ಗೆ ಮಾಹಿತಿ ನೀಡಿದರು. ಸುಳ್ಳು ಮತಗಳ ಜೋಡಣೆ, ಇರುವ ಮತಗಳನ್ನು ತೆಗೆದು ಹಾಕುವ ಕೆಟ್ಟ ಕೆಲಸದ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಲು ಈ ಸಹಿ ಸಂಗ್ರಹ ಮಾಡಲಾಗುತ್ತಿದೆ. ದೇಶದ ಭವಿಷ್ಯವನ್ನೇ ಹಾಳು ಮಾಡುವ ಮೂಲಕ ದೇಶದ್ರೋಹಿ ಕೆಲಸದಲ್ಲಿ ಕೇಂದ್ರ ಬಿಜೆಪಿ ಸರಕಾರ ತೊಡಗಿಕೊಂಡಿದೆ. ಜನರ ಪರವಾಗಿ ಇಲ್ಲದ ಈ ಆಡಳಿತ ಮೋದಿಯವರ ಹಿಡನ್ ಅಜೆಂಡಾ, ಅವರು ಮನುವಾದಿಯ ಗುಲಾಮಗಿರಿಯ ಆಡಳಿತ ನೀಡಲು ತಮ್ಮ ಗೆಳೆಯರನ್ನು ಕರೆದುಕೊಂಡು ದೇಶವನ್ನು ಲೂಟಿ ಮಾಡುತ್ತಿದ್ದಾರೆ, ಅದಕ್ಕಾಗಿ ಅವರು ಎಲ್ಲಾ ಸರಕಾರಿ ಸ್ವಾಯತ್ತ ಸಂಸ್ಥೆಗಳ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಸಂಸದ ಕೆ. ರಾಜಶೇಖರ ಹಿಟ್ನಾಳ, ಮಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಸ್. ಬಿ. ನಾಗರಳ್ಳಿ, ಗೂಳಪ್ಪ ಹಲಗೇರಿ, ರಾಮಣ್ಣ ಚೌಡಕಿ, ಗ್ಯಾರಂಟಿ ಅಧ್ಯಕ್ಷ ಎಸ್. ಬಾಲಚಂದ್ರನ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಸದಸ್ಯರಾದ ನಾಗರಾಜ ಕುಷ್ಟಗಿ, ಅಕ್ಬರ್ ಪಾಶಾ, ಗುರುರಾಜ ಹಲಗೇರಿ, ಗ್ಯಾರಂಟಿ ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಮುಖಂಡರಾದ ಭಾಷುಸಾಬ್ ಖತೀಬ್, ವಿಶ್ವನಾಥ ರಾಜು, ಪಂಪಣ್ಣ ಪೂಜಾರ, ಕಿಶೋರಿ ಬೂದನೂರ, ರೇಣುಕಾ ಪೂಜಾರ, ಮಂಜುಳಾ ಉಂಡಿ, ಶಿಲ್ಪಾ ಗುಡ್ಲಾನೂರ, ಗಂಗಮ್ಮ ನಾಯಕ ಅನೇಕರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande