ಶಿವಮೊಗ್ಗ, 05 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಶಿವಮೊಗ್ಗ ಜಿಲ್ಲೆಯ ತರೀಕೆರೆ – ಮೊಸರಳ್ಳಿ ನಡುವೆ ಬರುವ ಎಲ್ಸಿ.ನಂ: 24 ಮತ್ತು25 ಗಳನ್ನು ಮುಚ್ಚಲು ಅದಕ್ಕಾಗಿ ಎಲ್ಸಿ ತೆರೆಯಲು ಮತ್ತು ಪರೀಕ್ಷೆಗಾಗಿ ಅ.06 ರಿಂದ 08 ರವರೆಗೆ ತಾತ್ಕಾಲಿಕವಾಗಿ ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಎಲ್ಸಿ 24- ಕಾಳಿಂಗಹಳ್ಳಿ ರಸ್ತೆ ರೈಲು ನಿಲ್ದಾಣ ಅ. 06 ರಂದು ಬೆ. 9.00 ರಿಂದ 07 ರಂದು ಬೆ 10.00ರವರೆಗೆ ಮಾರ್ಗ-1 ಬಾರಂದೂರು ಮೂಲಕ ಎಲ್.ಸಿ. 25 ಹಳ್ಳಿಕೆರೆ ಮುಖಾಂತರ ಮೊಸರಳ್ಳಿಗೆ ಹೋಗುವುದು ಹಾಗು 2) ಅಪ್ಪಾಜಿ ಬಡಾವಣೆಯಿಂದ ಕಾಳಿಂಗನಹಳ್ಳಿ ರಸ್ತೆ, ಭದ್ರಾವತಿಯಿಂದ ಮೊಸರಳ್ಳಿಗೆ ಹೋಗುವ ವಾಹನಗಳು ಶಿವನಿ ಕ್ರಾಸ್ ಮುಖಾಂತರ ಅಂತರಗಂಗೆಯಿಂದ ಮೊಸರಳ್ಳಿಗೆ ಹೋಗುವುದು.
ಎಲ್.ಸಿ.25- ಕೆಂಚೇನಹಳ್ಳಿ ರಸ್ತೆ ರೈ.ನಿ.-ಅ.07 ಮತ್ತು 08 ರಂದು ಮಾರ್ಗ-1 ಬರಂದೂರು ಮೂಲಕ ಎಲ್ಸಿ -24 2) ಅಪ್ಪಾಜಿ ಬಡಾವಣೆಯಿಂದ ಕಾಳಿಂಗನಹಳ್ಳಿ ರಸ್ತೆ ಭದ್ರಾವತಿಯಿಂದ ಮೊಸರಳ್ಳಿಗೆ ಹೋಗುವ ವಾಹನಗಳು ಶಿವನಿ ಕ್ರಾಸ್ ಮುಖಾಂತರ ಅಂತರಗಂಗೆ ಯಿಂದ ಮೊಸರಳ್ಳಿಗೆ ಹೋಗುವುದು.
ಈ ಬದಲಿ ಮಾರ್ಗಗಳಲ್ಲಿ ಸಂಚರಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa