ನವದೆಹಲಿ, 03 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ನಾಲ್ಕು ದೇಶಗಳ ರಾಯಭಾರಿಗಳ ರುಜುವಾತುಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮೌರಿಟೇನಿಯಾದ ರಾಯಭಾರಿ ಅಹ್ಮದೌ ಸಿಡಿ ಮೊಹಮ್ಮದ್, ಲಕ್ಸೆಂಬರ್ಗ್ನ ರಾಯಭಾರಿ ಕ್ರಿಶ್ಚಿಯನ್ ಬೀವರ್, ಕೆನಡಾದ ಹೈಕಮಿಷನರ್ ಕ್ರಿಸ್ಟೋಫರ್ ಕೂಟರ್ ಹಾಗೂ ಸ್ಲೊವೇನಿಯಾದ ರಾಯಭಾರಿ ತೋಮಾಜ್ ಮೆನ್ಸಿನ್ ತಮ್ಮ ರುಜುವಾತುಗಳನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದರು.
ಭಾರತವು ಈ ದೇಶಗಳೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಬಲಪಡಿಸಲು ಬದ್ಧವಾಗಿದೆ ಎಂದು ರಾಷ್ಟ್ರಪತಿ ಭವನ ಮೂಲಗಳು ತಿಳಿಸಿವೆ
ಹಿಂದೂಸ್ತಾನ್ ಸಮಾಚಾರ್ / Rakesh Mahadevappa