ರಾಯಚೂರು, 02 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆಯಿಂದ ನಾಡ ಹಬ್ಬ ದಸರಾ ಹಿನ್ನೆಲೆಯಲ್ಲಿ ನಾಡದೇವಿಯ ಮೆರವಣಿಗೆಯು ನಗರದಲ್ಲಿ ಅಕ್ಟೋಬರ್ 2ರಂದು ವಿಶಿಷ್ಟವಾಗಿ ನಡೆಯಿತು.
ಮಹಾನಗರ ಪಾಲಿಕೆಯ ಜೋನಲ್ ಕಚೇರಿ ಆವರಣದಲ್ಲಿ ಮೆರವಣಿಗೆಗೆ ಚಾಲನೆ ದೊರೆಯಿತು. ರಾಯಚೂರು ನಗರಕ್ಷೇತ್ರದ ಶಾಸಕರಾದ ಡಾ.ಎಸ್ ಶಿವರಾಜ್ ಪಾಟೀಲ, ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಉಪಾಧ್ಯಕ್ಷರಾದ ಜೆ ಸಾಜಿದ್ ಸಮೀರ್ ಹಾಗೂ ಪಾಲಿಕೆಯ ಇನ್ನೀತರ ಸದಸ್ಯರು ಮತ್ತು ಪಾಲಿಕೆಯು ಆಯುಕ್ತರಾದ ಜುಬಿನ್ ಮೊಹಪಾತ್ರ ಹಾಗೂ ಇನ್ನೀತರ ಗಣ್ಯರು ತಲೆಗೆ ಪೇಟ ಸುತ್ತಿ ಭಾಗಿಯಾಗಿ ದಸರಾ ಮಹೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾದರು.
ಮಹಿಳೆಯರು ಕುಂಭಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಹಲಗೆ-ಡೊಳ್ಳಿನ ಮೇಳ, ಕೋಲಾಟ, ಹುಲಿಕುಣಿತ ವೇಷಧಾರಿಗಳು ಸೇರಿದಂತೆ ನಾನಾ ಬಗೆಯ ಕಲಾ ತಂಡಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು.
ಮಹಾನಗರ ಪಾಲಿಕೆಯ ಜೋನಲ್ ಕಚೇರಿಯಿಂದ ಆರಂಭಗೊ0ಡ ನಾಡದೇವಿಯ ಮೆರವಣಿಗೆಯು ಮಾಣಿಕಪ್ರಭು ಬನ್ನಿ ಮಂಟಪದವರೆಗೆ ಸಾಗಿತು.
ಮೆರವಣಿಗೆಯಲ್ಲಿ ಪಾಲಿಕೆಯ ಸದಸ್ಯರಾದ ಲಕ್ಷ್ಮೀ, ಡಿ.ಎ ಸಿಮನ್, ಜಯಣ್ಣ, ವಿ.ನಾಗರಾಟ, ಬಿ.ರಮೇಶ, ಶರಣಬಸಪ್ಪ ಬಲ್ಲಟಗಿ, ಬುಜ್ಜಮ್ಮ ಶಂಕರಪ್ಪ, ಅನಿತಾ ಜಿ.ತಿಮ್ಮಾರೆಡ್ಡಿ, ನಿಮಿತ್ ಸಲ್ಯಾ ಮಹ್ಮದ್ ಶಾಲಂ, ಖುರ್ಷಿದಾ ಬಾನು ಅಬ್ದುಲ್ ವಾಹಿದ್, ದರೂರ ಬಸವರಾಜ ಪಾಟೀಲ್, ರತ್ನ ಪ್ರಶಾಂತಿ, ಎಂ ಪವನ್ ಕುಮಾರ ಎಂ.ಈರಣ್ಣ, ಉಮಾ ರವೀಂದ್ರ ಜಲ್ದಾರ, ನೂರ ಪಾಷಾ ಎಸ್, ಗಾಯತ್ರಿ ಹರೀಶ ನಾಡಗೌಡ, ಈ ಶಶಿರಾಜ, ಲಂತಾ ಕಡಗೋಲ್ ಅಂಜಿನಯ್ಯ, ಹೇಮಲತಾ ಪಿ.ಬೂದೆಪ್ಪ, ಎನ್.ಕೆ.ನಾಗರಾಜ, ಜಿಂದಪ್ಪ, ಸರೋಜಮ್ಮ ದೊಡ್ಡ ಮಲ್ಲೇಶಪ್ಪ, ಎನ್. ಶ್ರೀನಿವಾಸರೆಡ್ಡಿ, ರೇಖಾ ಮಹೀಂದ್ರರೆಡ್ಡಿ, ಶೈನಾಜ್ ಬೇಗಂ ಜಿ.ಹೆಚ್.ಪಾಜಿಬಾಬು, ಪಿ.ನವನೀತಾ ಪಿ. ಶ್ರೀನಿವಾಸ ರೆಡ್ಡಿ, ಕವಿತಾ ಜಿ. ತಿಮ್ಮಾರೆಡ್ಡಿ, ಸುನೀಲ್ ಕುಮಾರ್, ವೆಂಕಟಮ್ಮ ಎನ್. ಶ್ರೀನಿವಾಸರೆಡ್ಡಿ, ಅಂಜನಮ್ಮ ಶ್ಯಾಮಸುಂದರ್, ಸಮೀನಾ ಮುಕ್ರಂ, ಸಣ್ಣ ನರಸರೆಡ್ಡಿ, ತಿಮ್ಮಪ್ಪ ನಾಗೇಂದ್ರಪ್ಪ, ಸ್ವಾತಿ ಹರಿಬಾಬು, ನಾಮ ನಿರ್ದೇಶಿತ ಸದಸ್ಯರಾದ ಮಹ್ಮದ್ ಫೆರೋಜ್, ವೆಂಕಟೇಶ, ಅಮಿತ್ ಕುಮಾರ ಲೋಧ, ಮಣಿಕಂಠ, ಮುನಿಸ್ವಾಮಿ ಹಾಗೂ ಮುಖಂಡರಾದ ರವಿ ಬೋಸರಾಜು, ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತರಾದ ಶರಣಬಸಪ್ಪ ಕೋಟೆಪ್ಪಗೋಳ, ಆಡಳಿತ ವಿಭಾಗದ ಉಪ ಆಯುಕ್ತರಾದ ಸಂತೋಷರಾಣಿ ಎಂ., ಅಭಿವೃದ್ಧಿ ವಿಭಾಗದ ಉಪ ಆಯುಕ್ತರಾದ ಮೇನಕಾ ಪಟೇಲ್ ಹಾಗೂ ಇತರರು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್