ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಂದು ರಾಷ್ಟ್ರಭಕ್ತಿ ಸಂಘಟನೆ : ಡಾ.ವೀರಣ್ಣ ಚರಂತಿಮಠ
ವಿಜಯಪುರ, 14 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರಭಕ್ತಿ ಸಂಘಟನೆ, ವ್ಯಕ್ತಿ ನಿರ್ಮಾಣ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ದೇಶಕ್ಕೆ ಆರ್.ಎಸ್.ಎಸ್.ತನ್ನದೆಯಾದ ರೀತಿಯಲ್ಲಿ ಕೋಡುಗೆ ನೀಡಿದ್ದು ಜನರಲ್ಲಿ ದೇಶಪ್ರೇಮವನ್ನು ತುಂಬುವ ಏಕೈಕ ರಾಷ್ಟ್ರಭಕ್ತ ಸಂಘಟನೆಯಾಗಿದೆ
ಆರ್ ಎಸ್ ಎಸ್


ವಿಜಯಪುರ, 14 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರಭಕ್ತಿ ಸಂಘಟನೆ, ವ್ಯಕ್ತಿ ನಿರ್ಮಾಣ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ದೇಶಕ್ಕೆ ಆರ್.ಎಸ್.ಎಸ್.ತನ್ನದೆಯಾದ ರೀತಿಯಲ್ಲಿ ಕೋಡುಗೆ ನೀಡಿದ್ದು ಜನರಲ್ಲಿ ದೇಶಪ್ರೇಮವನ್ನು ತುಂಬುವ ಏಕೈಕ ರಾಷ್ಟ್ರಭಕ್ತ ಸಂಘಟನೆಯಾಗಿದೆ ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಹಾಗೂ ಬಾಗಲಕೋಟೆ ಮತಕ್ಷೇತ್ರದಿಂದ ಕಾಂಗ್ರೆಸ್ಸ ಸಚಿವ ಪ್ರಿಯಾಂಕ ಖರ್ಗೆ ಆರ್.ಎಸ್.ಎಸ್ ವಿರುದ್ಧ ನೀಡಿದ ಹೇಳಿಕೆಯನ್ನು ಖಂಡಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಆರ್.ಎಸ್.ಎಸ್. ದೇಶಕ್ಕೆ ಸಮರ್ಪಣೆಯಾದ ಸಂಘಟನೆಯಾಗಿದೆ. ಯಾವುದೆ ಜಾತಿ ಧರ್ಮ ಬೇದಬಾವ ಇಲ್ಲ, ಇಲ್ಲಿ ಸಂತರು ಶರಣರು, ಲಕ್ಷಾಂತರ ದೇಶಭಕ್ತರು ಇದ್ದಾರೆ. ಪ್ರಿಯಾಂಕ ಖರ್ಗೆಯವರು ಹೈಕಾಂಡ ಮೆಚ್ಚಿಸಲು ಆರೆಸ್ಸಸ್ ವಿರೋಧಿಸುವ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಸಂಧರ್ಭದಲ್ಲಿ ಜನರ ಗಮನ ಬೇರೆಯೆಡೆ ಸೇಳೆಯಲು ಈ ರೀತಿ ಆರ್.ಎಸ್.ಎಸ್. ಬಗ್ಗೆ ಹಗುರವಾಗಿ ಮಾತನಾಡಿತ್ತಿದ್ದಾರೆ, ಜನರು ಇದಕ್ಕೆ ತಕ್ಕ ಪಾಠ ಕಲಿಸುತ್ತಾರೆ. ಸುಧಿರ್ಘ 100 ವರ್ಷಗಳಿಂದ ರಾಷ್ಟ್ರ ಸೇವೆ, ಸಮಾಜ ಸೇವೆಯಲ್ಲಿ ಆರ್.ಎಸ್.ಎಸ್‍ನ ಪರಿಶ್ರಮ ಅಡಗಿದೆ, ಇನ್ನೂ 100 ವರ್ಷ ಕಳೆದರೂ ಬ್ಯಾನ ಮಾಡೋಕೆ, ನಿರ್ಬಂಧಿಸೊಕೆ ಯಾರಿಂದಲೂ ಸಾಧ್ಯವಿಲ ಎಂದರು.

ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಪ್ರಿಯಾಂಕ ಖರ್ಗೆ ಕುಕ್ಕರ ನಂತಹ ಬಾಂಬ ಬ್ಲಾಸ್ಟ ಆದಾಗ, ಹಾದಿಬಿದಿಹಿಡಿದು ವಿಧಾನ ಸೌಧದವರೆಗೆ ಪಾಕಿಸ್ತಾನದ ಪರ ಘೋಷಣೆ ಹಾಕಿದಾಗ ಅವರು ಹಾಗೆ ಕೂಗಲೇ ಇಲ್ಲ ಅನ್ನುವ ಗೋಸುಂಬೆ, ಪ್ಯಾಲೇಸ್ಟೈನ್ ಲೆಬನಾನ್ ನಂತಹ ಉಗ್ರವಾದಿಗಳ ಭಾವಚಿತ್ರ ಹಾಗೂ ಧ್ವಜ ಹಿಡಿದು ಉಗ್ರವಾದಿಗಳ ಪರ ಘೋಷಣೆ ಹಾಕಿದಾಗ ಮುಖ್ಯಮಂತ್ರಿಗಳಿಗೆ ತನಿಖೆ ಮಾಡಿ ಎಂದು ಪತ್ರ ಬರಿಯೋಕೆ ಭಯ ಇದೆ ಎಂದು ವಾಗ್ದಾಳಿ ನಡೆಸಿದರು. ಪ್ರಿಯಾಂಕ ಖರ್ಗೆ ಹೆಸರೂ ಗಂಡೋ ಹೆಣ್ಣೋ ಎಂಬುವುದನ್ನು ಸಾಬೀತುಪಡಿಸಲಿ, ಆಮೇಲೆ ನೋಡೋಣ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ ಸರ್ಕಾರಿ ಜಾಗೆಗಳಲ್ಲಿ ಆರ್.ಎಸ್.ಎಸ್. ಕಾರ್ಯ ನಿಷೇಧಿಸಬೇಕು ಎಂದು ಸಚಿವ ಪ್ರಿಯಾಂಕ ಖರ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಹಾಸ್ಯಾಸ್ಪದವಾಗಿದೆ, ತಮ್ಮ ಸ್ವಂತ ಜಿಲ್ಲೆಯಾದ ಕಲಬುರಗಿಯಲ್ಲಿ ಶೈಕ್ಷಣಿಕ ರಂಗದಲ್ಲಿ ಮೂಲಸೌಕರ್ಯ, ಅಭಿವೃದ್ಧಿ ವಿಚಾರ, ಸಂಪೂರ್ಣ ಹಿಂದಿರುವ ಜಿಲ್ಲೆಯಾಗಿದ್ದು, ರೈತರು ಬರಗಾಲ ಪರಿಹಾರಕ್ಕೆ ಬೀದಿ ಮೇಲೆ ಹೋರಾಟ ಮಾಡುತ್ತಿದ್ದಾರೆ, ಭಾಗ್ಯವತಿ ಅಗ್ಗಿಮಠ ಎನ್ನುವ ಗ್ರಂಥ ಪಾಲಕಿ 8 ತಿಂಗಳಿಂದ ಸಂಬಳ ಬಂದಿಲ್ಲ ಕುಟುಂಬ ನಿರ್ವಹಣೆ ಆಗುತ್ತಿಲ್ಲ ಎಂದು ಮರಣ ಪತ್ರ ಬರೆದಿದ್ದು ಆತ್ಮ ಹತ್ಯ ಮಾಡಿಕೊಂಡಿದ್ದಾರೆ, ಭ್ರಷ್ಟ ವ್ಯವಸ್ಥೆಗೆ ಸಚಿವ ಪಾಂಚಾಳ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕಾನೂನು ಸುವ್ಯವಸ್ಥೆ ಜಿಲ್ಲೆಯಲ್ಲಿ ಸತ್ತು ಹೋಗಿದೆ, ದೇಶವಿರೋಧಿ ಹೇಳಿಕೆ ನೀಡಿವ ಎಸ್‍ಡಿಪಿಐ ಬ್ಯಾನ ಮಾಡೋಕೆ ಅಸಮರ್ಥತೆ ಹಾಗೂ ಭಯ ಕಾಡುತ್ತಿದೆ, ಮರಿ ಖರ್ಗೆಯನ್ನು ಸಚಿವ ಸಂಪೂಟದಿಂದ ವಜಾ ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ರಾಜು ನಾಯ್ಕರ, ಬಸವರಾಜ ಯಂಕಂಚಿ, ನಗರಸಭೆ ಉಪಾಧ್ಯಕ್ಷ ಶೋಭಾ ರಾವ, ಶಶಿಕಲಾ ಮಜ್ಜಗಿ, ಸರಸ್ವತಿ ಕುರಬರ, ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ಸುರೇಶ ಮಜ್ಜಗಿ ಸೇರಿದಂತೆ ಅನೇಕ ಜನ ಕಾರ್ಯಕರ್ತರು ಭಾಗವಹಿಸಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande