ವಿಜಯಪುರ, 12 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಕ್ರಮವಾಗಿ ಮರಳನ್ನು ಕಳ್ಳತನದಿಂದ ಮಾರಾಟ ಮಾಡುವು ಉದ್ದೇಶದಿಂದ ಜಿಪಿಎಸ್ ಲೋಕೇಸ್ ಬಂದ್ ಮಾಡಿ ಹೋಗುತ್ತಿದ್ದಾಗ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ.
ಹಣಮಂತ ಹರನಾಳ, ಪ್ರಜ್ವಲ್ ತಳವಾರ ಬಂಧಿತ ಆರೋಪಿಗಳು. ವಾಹನಗಳಲ್ಲಿ ಅಳವಡಿಸಿದ ಜಿಪಿಎಸ್ ಲೋಕೇಸ್ ಬಂದ್ ಮಾಡಿ ಅಕ್ರಮವಾಗಿ ಮರಳನ್ನು ಸಾಗಿಸುವಾಗ ಪೊಲೀಸರು ದಾಳಿಗೈದು 24 ಸಾವಿರ ಮೌಲ್ಯದ 8 ಬ್ರಾಸ್ನಷ್ಟು ಮರಳು ಹಾಗೂ 18 ಲಕ್ಷ ಮೌಲ್ಯದ ಎರಡು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande