ರಾಷ್ಟಿಯ ಸ್ವಯಂಸೇವಕ ಸಂಘದಿ0ದ ಕೋಲಾರದಲ್ಲಿ ಪಥಸಂಚಲನ
ರಾಷ್ಟಿಯ ಸ್ವಯಂಸೇವಕ ಸಂಘದಿ0ದ ಕೋಲಾರದಲ್ಲಿ ಪಥಸಂಚಲನ
ಕೋಲಾರದಲ್ಲಿ ರಾಷ್ಟಿಯ ಸ್ವಯಂಸೇವಕ ಸಂಘಯ ಶತಮಾನೋತ್ಸವದ ಅಂಗವಾಗಿ ನಗರದಲ್ಲಿ ಪಥಸಂಚಲನ ನಡೆಯಿತು.


ಕೋಲಾರ, ೧೨ ಅಕ್ಟೋಬರ್ (ಹಿ.ಸ) :

ಆ್ಯಂಕರ್ : ಕೋಲಾರ ನಗರ ಮತ್ತು ಗ್ರಾಮಾಂತರ ರಾಷ್ಟಿಯ ಸ್ವಯಂಸೇವಕ ಸಂಘ ಆರ್‌ಎಸ್‌ಎಸ್‌ನಿಂದ ಸಂಘಟನೆಯ ಶತಮಾನೋತ್ಸವದ ಅಂಗವಾಗಿ ನಗರದಲ್ಲಿ ಸಾವಿರಾರು ಮಂದಿ ಗಣವೇಷಧಾರಿಗಳುಪಥಸಂಚಲನ ನಡೆಸಿದರು.

ಕೋಲಾರ ನಗರದ ಅಂತರಗ0ಗೆ ರಸ್ತೆಯ ಕುವೆಂಪು ಪಾರ್ಕ್ ಮುಂಭಾಗ ಆರಂಭಗೊ0ಡ ಪಥಸಂಚಲನದಲ್ಲಿ ಡಾ.ಹೆಡಗೇವಾರ್ ಮತ್ತು ಭಾರತಮಾತೆಯ ಭಾವಚಿತ್ರವನ್ನು ತೆರದ ಜೀಪಿನಲ್ಲಿ ಮೆರವಣಿಗೆ ನಡೆಸಿದ್ದು, ಜೀಪಿನ ಹಿಂದೆ ಮುಂದೆ ನೂರಾರು ಆರ್‌ಎಸ್‌ಎಸ್ ಗಣವೇಷಧಾರಿಗಳು ದಂಡ ಹಿಡಿದು ಪಥಸಂಚಲನದಲ್ಲಿ ಪಾಲ್ಗೊಂಡರು.

ಪಥಸAಚಲನ ಕುವೆಂಪು ಪಾರ್ಕ್ ಬಳಿ ಆರಂಭಗೊ0ಡು ಮುನೇಶ್ವರ ನಗರ, ಕಾರಂಜಿಕಟ್ಟೆ ಮುಖ್ಯರಸ್ಥೆಯ ಮೂಲಕ ಹಾದು, ಕಾಳಮ್ಮ ಗುಡಿ ಬೀದಿ, ಚಂಪಕ್ ವೃತ್ತ, ದೊಡ್ಡಪೇಟೆ, ಶಾರದಾಟಾಕೀಸ್ ರಸ್ತೆ, ಬಸ್ ನಿಲ್ದಾಣ ವೃತ್ತದ ಮೂಲಕ ಆರಂಭಗೊ0ಡ ಸ್ಥಳವಾದ ಕುವೆಂಪು ಪಾರ್ಕ್ ಬಳಿ ಕೊನೆಗೊಂಡಿತು. ಆರ್‌ಎಸ್‌ಎಸ್ ವಿಭಾಗೀಯ ಸಂಘಚಾಲಕ್ ಡಾ.ಶಂಕರ್‌ನಾಯಕ್, ನಗರ ಸಂಘ ಸಂಚಾಲಕ ಜನಾರ್ಧನ್ ನೇತೃತ್ವದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಸಾಗಿ ಬರುತ್ತಿದ್ದಂತೆ ಕಾಳಮ್ಮ ಗುಡಿಬೀದಿ, ದೊಡ್ಡಪೇಟೆ ಮುಖ್ಯರಸ್ತೆಯಲ್ಲಿ ಸಾರ್ವಜನಿಕರು ಪುಷ್ಪವೃಷ್ಟಿಯ ಮೂಲಕ ಸ್ವಾಗತ ಕೋರಿದರು.

ಪಥಸಂಚಲನದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಹಾಗೂ ಅವರ ಪುತ್ರ ಹರ್ಷಿತ್ ಜತೆಗೂಡಿ ಭಾಗವಹಿಸಿ ಗಮನ ಸೆಳೆದರು. ಪಥಸಂಚಲನದಲ್ಲಿ ಗಣವೇಷಧಾರಿಗಳಾಗಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಸತ್ಯನಾರಾಯಣ, ಅನಂತನಾರಾಯಣ, ಜಗದೀಶ್ ಜಗ್ಗಿ ಅಶ್ವಥ್‌ರಾಮ್, ನಂದೀಶ್, ರಮೇಶ್, ಪವನ್,ವಕೀಲ ನಟರಾಜ್‌ಬಾಬು, ಸಾ.ಮಾ.ಪ್ರಸನ್ನ,ಬಿಜೆಪಿ ಮುಖಂಡರಾದ ವಿಜಯಕುಮಾರ್, ಸಾ.ಮಾ.ಅನಿಲ್‌ಬಾಬು, ಎಂ.ಪಿ.ನಾರಾಯಣಸ್ವಾಮಿ, ಗ್ರಾ.ಪಂ ಸದಸ್ಯ ಅಶ್ವಥ್ಥರಾಮ್,ಶಿವಶೇಖರ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದು, ಜತೆಗೆ ಗಣವೇಷಧಾರಿ ಯುವಕರ ಹೊಸ ತಂಡವೂ ಗಮನ ಸೆಳೆಯಿತು.

ಚಿತ್ರ : ಕೋಲಾರದಲ್ಲಿ ರಾಷ್ಟಿಯ ಸ್ವಯಂಸೇವಕ ಸಂಘಯ ಶತಮಾನೋತ್ಸವದ ಅಂಗವಾಗಿ ನಗರದಲ್ಲಿ ಪಥಸಂಚಲನ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande