ಬೆಂಗಳೂರು, 11 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರೆಲ್ಲರೂ ಮುಡಾ ಅಕ್ರಮದಲ್ಲಿ ದೊಡ್ಡ ಪಾಲುದಾರರು ಎಂದು ಬಿಜೆಪಿ ಆರೋಪಿಸಿದೆ.
ಮೈಸೂರಿನಂತಹ ದೊಡ್ಡ ನಗರದಲ್ಲಿ ಬಡವರು ಮುಡಾದಿಂದ ಒಂದು ಸೈಟ್ ಪಡೆಯಲು ತಮ್ಮ ಜೀವಮಾನದ ದುಡಿಮೆಯನ್ನು ಹೂಡಿದರೂ ದೊರೆಯುವುದಿಲ್ಲ, ಇಂತಹದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾದ ರಾಕೇಶ್ ಪಾಪಣ್ಣ ಹಾಗೂ ಮರಿಗೌಡ ಅವರ ಹೆಸರಿನಲ್ಲಿ ನೂರಾರು ಮುಡಾ ಸೈಟ್ಗಳು ಹೇಗೆ ನೋಂದಾಯಿಸಲ್ಪಟ್ಟಿವೆ ಎಂದು ರಾಜ್ಯ ಬಿಜೆಪಿ ಘಟಕ ಪ್ರಶ್ನಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa