ಕೋಲಾರ, ೨0 ಜುಲೈ (ಹಿ.ಸ.) :
ಆ್ಯಂಕರ್ : ಪ್ರತಿಯೊಬ್ಬರು ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕು. ಇತರರಿಗೆ ಸಂವಿಧಾನದ ಆಶಯಗಳನ್ನು ಅರ್ಥಮಾಡಿಸಬೇಕು .ಯುವಕರು ಧರ್ಮ ಜಾತಿಯ ಭೇದ ಭಾವವಿಲ್ಲದೆ ಎಲ್ಲರನ್ನು ಪ್ರೀತಿಸುವಂತಾಗಬೇಕು. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರು ಹಂಚಿಕೊಳ್ಳಬೇಕು.ಸಮಯ ಸಿಕ್ಕಾಗ ಜಾತ್ಯತೀತ ಮತ್ತು ಸಮ ಸಮಾಜದ ಬಗ್ಗೆ ಮಾತನಾಡಿ .ಪ್ರತಿಯೊಬ್ಬರು ಸಂವಿಧಾನದ ಆಶಯಗಳನ್ನು ಸಮಾಜದಲ್ಲಿ ಪಸರಿಸಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಕರೆ ನೀಡಿದರು.
ಕೋಲಾರದಲ್ಲಿ ನಡೆದ ಸಂವಿಧಾನ ಓದು ಅಭಿಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಗಮೋಹನ ದಾಸ್ ಮಾತನಾಡಿದರು. ಬೆಂಗಳೂರಿನ ಅನಂತ ನಾಯಕ್ ಮಾತನಾಡಿ ಸಂವಿಧಾನದ ಆಶಯಗಳನ್ನು ಮತ್ತು ಮೌಲ್ಯಗಳನ್ನು ಪ್ರಚಾರ ಮಾಡಬೇಕು .ಕೋಮುವಾದ ,ಜಾತಿ ವ್ಯವಸ್ಥೆಯಿಂದ ನಡೆಯುವ ದೌರ್ಜನ್ಯಗಳನ್ನು ಸಂವಿಧಾನ ಮಾತ್ರ ತಡೆಯ ಬಹುದಾಗಿದೆ.ಎಲ್ಲರು ಸಮಾನರೆಂಬ ಭಾವನೆ ಬರಬೇಕಾದರೆ ಸಂವಿಧಾನದ ಆಶಯಗಳನ್ನು ಪಾಲಿಸಬೇಕು. ಅಲ್ಪ ಸಂಖ್ಯಾತರನ್ನು ಅನುಮಾನದಿಂದ ನೋಡಲಾಗುತ್ತಿದೆ. ಸಮಾಜವನ್ನು ಕೋಮುವಾದ ದೌರ್ಜನ್ಯದಿಂದ ಮುಕ್ತಗೊಳಿಸಲು ಸಂವಿಧಾನದಿಂದ ಮಾತ್ರ ಸಾಧ್ಯ .ಸಮ ಸಮಾಜ ಮತ್ತು ಜಾತಿರಹಿತ ಸಮಾಜ ನಿರ್ಮಾಣ ಮಾಡಲು ಸಂವಿಧಾನವನ್ನು ಅಸ್ತ್ರವನ್ನಾಗಿ ಬಳಸಬೇಕೆಂದು ತಿಳಿಸಿದರು.
ಸಂವಿಧಾನದ ರಥವನ್ನು ರಾಜ್ಯದ ಎಲ್ಲ ಕಡೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ನಿರಂತರವಾಗಿ ಎಲ್ಲೆಡೆ ಎಳೆದುಕೊಂಡು ಹೋಗುತ್ತಿದ್ದಾರೆ. ಅವರೊಂದಿಗೆ ನಾವು ಹೆಗಲು ನೀಡ ಬೇಕು. ಸಂವಿಧಾನದ ಆಶಯಗಳನ್ನು ನಿರಂತರವಾಗಿ ಎಲ್ಲರಿಗೂ ತಲಪಿಸಬೇಕು. ಸಂವಿಧಾನವನ್ನು ಬದಲಿಸುತ್ತೇವೆ ಎಂದು ಒಂದು ಗುಂಪು ಹೇಳುತ್ತಿದೆ . ಅವರಿಗೆ ಸಂವಿಧಾನದ ಆಶಯಗಳ ಬಗ್ಗೆ ಅರಿವು ಇಲ್ಲ.ಪದೇ ಪದೇ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ. ದೇಶದ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕೋಲಾರ ಜಿಲ್ಲಾ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ ಸಂವಿಧಾನವನ್ನು ಯಾರು ಗೌರವಿಸುವಿದಲ್ಲವೋ ಅವರು ಭಾರತೀಯರಲ್ಲ . ಸಂವಿಧಾನವನ್ನು ಗೌರವಿಸುವುದು ಎಂದರೆ ದೇಶವನ್ನು ಗೌರವಿಸದಂತೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಪಂಡಿತ್ ಮುನಿವೆಂಕಟಪ್ಪ ,ವಿಜಯ ಕುಮಾರ್ ಅರಿವು ಶಿವಪ್ಪ ಮುಂತಾದವರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್