ರಾಯಚೂರು, 20 ಜುಲೈ (ಹಿ.ಸ.) :
ಆ್ಯಂಕರ್ : ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕಾಂದೂ ಅವರು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಚಿತ್ತಾಪೂರು, ನರಕಲದಿನ್ನಿ ಹಾಗೂ ಮುದಗಲ್ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಲಿಂಗಸುಗೂರು ತಾಲೂಕಿನ ಚಿತ್ತಾಪುರ ಗ್ರಾಮ ಪಂಚಾಯತಿಯ ಜಾವೂರು ಗ್ರಾಮದ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ಸ್ಥಳವಾದ ನಾರಯಣಪುರ ಆಣೆಕಟ್ಟಿಗೆ ತೆರಳಿ ಸಿಇಓ ಅವರು ಕಾಮಗಾರಿ ವೀಕ್ಷಣೆ ನಡೆಸಿದರು. ಪ್ರಗತಿ ಹಂತದಲ್ಲಿರುವ 160 ಎಂಎಲ್ಡಿ ಸಾಮಥ್ರ್ಯದ ನೀರಿನ ಶುದ್ಧೀಕರಣ ಘಟಕಗಳನ್ನು ಪರಿಶೀಲಿಸಿದರು.
ನಾರಾಯಣಾಪುರ ಅಣೆಕಟ್ಟಿಗೆ ತೆರಳಿ ಜಾಕ್ವೆಲ್ ಕಮ್ ಪಂಪ್ಹೌಸ್ ಡಿಸೈನ್ ಹಾಗೂ ಕಾಮಗಾರಿ ಪ್ರಗತಿಯ ಕುರಿತು ಇದೆ ವೇಳೆ ಸಿಇಓ ಅವರು ಮಾಹಿತಿ ಪಡೆದರು.
ಮುಂದುವರೆದು ಮುದಗಲ್ ಗ್ರಾಮದ ಸ್ಟಾಕ್ ಯಾರ್ಡ್ ಕ್ಯಾಂಪ್ಗೆ ಭೇಟಿ ನೀಡಿ ಬಹುಗ್ರಾಮ ಕುಡಿಯುವ ನೀರಿನ ವಿವಿಧ ಘಟಕಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ಕೈಗೊಂಡು ಎಸ್ಎನ್ಸಿ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳಿಸಿ ಪೂರ್ಣಗೊಳಿಸಲು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು, ಗ್ರಾ.ಕು.ನೀ.ಸ. ಉಪವಿಭಾಗದ ಅಭಿಯಂತರರು, ಪಿಎಂಸಿ ಮತ್ತು ಎಸೆನ್ಸಿ ಸಂಸ್ಥೆಯ ಮುಖ್ಯಸ್ಥರು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್