ಬಳ್ಳಾರಿ : ನವ-ಯುವ ಸೈನಿಕನಿಗೆ ಶುಭ ಹಾರೈಸಿ, ಬೀಳ್ಕೊಡುಗೆ
ಬಳ್ಳಾರಿ, 10 ಜೂನ್ (ಹಿ.ಸ.) : ಆ್ಯಂಕರ್ : ಬಳ್ಳಾರಿಯ ಸಿ.ಎಂ. ರಾಜೇಶ್ (19) ಇವರು ತಮ್ಮ ಮೂರನೇ ಪ್ರಯತ್ನದಲ್ಲಿ ಭಾರತೀಯ ಸೇನೆಯ ಸೈನಿಕನಾಗಿ ಆಯ್ಕೆಗೊಂಡು ಸುಮಾರು 7 ತಿಂಗಳಿಗೂ ಅಧಿಕ ಕಠಿಣ ತರಬೇತಿ ಪಡೆದು ಅಸ್ಸಾಂನ ಬಾಂಗ್ಲಾ ಗಡಿಯಲ್ಲಿ ಕರ್ತವ್ಯಕ್ಕೆ ಸೇರ್ಪಡೆ ಆಗುತ್ತಿರುವ ಹಿನ್ನಲೆಯಲ್ಲಿ ಸಹಮತ ವ
ಬಳ್ಳಾರಿ : ನವ-ಯುವ ಸೈನಿಕನಿಗೆ ಶುಭ ಹಾರೈಸಿ, ಬೀಳ್ಕೊಡುಗೆ


ಬಳ್ಳಾರಿ, 10 ಜೂನ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ಸಿ.ಎಂ. ರಾಜೇಶ್ (19) ಇವರು ತಮ್ಮ ಮೂರನೇ ಪ್ರಯತ್ನದಲ್ಲಿ ಭಾರತೀಯ ಸೇನೆಯ ಸೈನಿಕನಾಗಿ ಆಯ್ಕೆಗೊಂಡು ಸುಮಾರು 7 ತಿಂಗಳಿಗೂ ಅಧಿಕ ಕಠಿಣ ತರಬೇತಿ ಪಡೆದು ಅಸ್ಸಾಂನ ಬಾಂಗ್ಲಾ ಗಡಿಯಲ್ಲಿ ಕರ್ತವ್ಯಕ್ಕೆ ಸೇರ್ಪಡೆ ಆಗುತ್ತಿರುವ ಹಿನ್ನಲೆಯಲ್ಲಿ ಸಹಮತ ವೇದಿಕೆಯು ಅವರನ್ನು ಅವರ ಮನೆಯಲ್ಲಿ ಮಂಗಳವಾರ ಸನ್ಮಾನಿಸಿ, ಬೀಳ್ಕೊಟ್ಟು ಶುಭ ಹಾರೈಸಿದೆ.

ಸಿ.ಎಂ. ರಾಜೇಶ್ ಅವರ ತಂದೆ ಗೋವಿಂದರಾಜ್ ಅವರು ಸಿಆರ್‍ಪಿಎಫ್‍ನಲ್ಲಿ 21 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಗೋವಿಂದರಾಜು ಮತ್ತು ಲಕ್ಷ್ಮೀ ಅವರ ಏಕೈಕ ಪುತ್ರ, ರಾಶಿ ಹಾಗೂ ಅಶ್ವಿನಿ ಅವರ ಸಹೋದರ ಸೈನ್ಯ ಸೇರುತ್ತಿರುವುದು ಕುಟುಂಬಕ್ಕೇ ಹೆಮ್ಮೆಯ ವಿಷಯವಾಗಿದೆ.

ಸಹಮತ ವೇದಿಕೆಯ ಸಂಚಾಲಕ ಸಿರಿಗೇರಿ ಪನ್ನರಾಜ್ ಅವರು, ಚಿಕ್ಕ ವಯಸ್ಸಿಗೇ ಸಿ.ಎಂ. ರಾಜೇಶ್ ಸೈನ್ಯ ಸೇರುತ್ತಿರುವುದು ಹೆಮ್ಮೆಯ ವಿಷಯ. ಕುಟುಂಬದ ಏಕೈಕ ಪುತ್ರ ಎನ್ನುವ ವ್ಯಾಮೋಹ ಎಲ್ಲದೇ ಮಗನನ್ನು ದೇಶ ಸೇವೆಗೆ ಕಳುಹಿಸುತ್ತಿರುವ ಪೋಷಕರ ತ್ಯಾಗ ಸದಾ ಅಭಿನಂದನೀಯ. ಯುವಪೀಳಿಗೆ ಸೈನ್ಯ ಸೇರಲು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ತೋರಿಸಬೇಕು ಎಂದರು.

ಸಂಗನಕಲ್ಲು ವಿಜಯಕುಮಾರ್, ರಿಜ್ವಾನ್, ಕಾಪೆರ್Çೀರೇಟರ್ ಕೆ.ಎ. ಚೇತನ, ಕಲಾವತಿ, ಕೋಮಲ್, ರವಿ ಹಾಗೂ ರಾಜೇಶ್ ಕುಟುಂಬ ಸದಸ್ಯರು ಈ ಸಂದರ್ಭದಲ್ಲಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande