ಮುನಿರಾಬಾದ್, 7 ಜೂನ್ (ಹಿ.ಸ):
ಆ್ಯಂಕರ್: ತಾವರಗೇರಿಯ ಶ್ಯಾಮೀದ ಅಲಿ ದರ್ಗಾದ ಉರುಸು ಮುಗಿಸಿಕೊಂಡು ಹೊಸಪೇಟೆಗೆ ಹಿಂದಿರುಗುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದ ಕಾರಣ ಸ್ಥಳದಲ್ಲೇ ಒಬ್ಬ ಸಾವನ್ನಪ್ಪಿದ್ದು ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಕೊಪ್ಪಳ ತಾಲೂಕಿನ ಜಬ್ಬಲಗುಡ್ಡದಲ್ಲಿ ನಡೆದಿದೆ.
ಹೊಸಪೇಟೆ ತಾಲೂಕಿನ ಡಣಾಪುರದ ಅಲ್ಲಾಸಾಬ (31) ಪತ್ನಿ ಹಾಗು 2 ವರ್ಷದ ಮಗುವಿನೊಂದಿಗೆ ತಾವರಗೇರಕ್ಕೆ ಹೋಗಿ ಉರುಸುನಲ್ಲಿ ಪಾಲ್ಗೊಂಡು ಡಣಾಪುರಕ್ಕೆ ಹಿಂದಿರುಗುತ್ತಿದ್ದಾಗ ಬೈಕ್ ಸ್ಕಿಡ್ ಆದ ಕಾರಣ ಎಲ್ಲರೂ ರಸ್ತೆಗೆ ಬಿದ್ದಾಗ ಅಲ್ಲಾಸಾಬ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಈತನ ಪತ್ನಿ ಹಾಗು ಮಗು ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಹೊಸಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನಿರಾಬಾದ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.