ಬಳ್ಳಾರಿ, 31 ಜನವರಿ(ಹಿ.ಸ):
ಆ್ಯಂಕರ್: ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ನ್ನು ಮಾಜಿ ಸಚಿವ ಮುಂಡ್ಲೂರು ದಿವಾಕರ ಬಾಬು ಅವರಿಗೆ ನೀಡಬೇಕು ಎಂದು ರೈಸ್, ಆಯಿಲ್ ಮಿಲ್ ಅಂಡ್ ಜನರಲ್ ವರ್ಕರ್ಸ್ ಸಂಘದ ಅಧ್ಯಕ್ಷರಾದ ಪಿ.ವೀರೇಶ್, ತಿಮ್ಮಪ್ಪ ಆಗ್ರಹಿಸಿದ್ದಾರೆ.
ಮುಂದಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಎಂ.ದಿವಾಕರ ಬಾಬು ಅವರಿಗೆ ಟಿಕೇಟ್ ನೀಡಬೇಕು ಎಂದು ಆಗ್ರಹಿಸಿದ ಅವರು, ಒಂದು ವೇಳೆ ಇದು ಆಗದಿದ್ದಲ್ಲಿ ಕಾರ್ಮಿಕರ ಪರವಿದ್ದು, ನಮ್ಮ ಕೆಲಸ ಮಾಡಿಕೊಡುವ ವ್ಯಕ್ತಿಗಳನ್ನು ನಮ್ಮ ಸಂಘವು ಚುನಾವಣೆಯಲ್ಲಿ ಬೆಂಬಲಿಸುತ್ತದೆ ಎಂದು ತಿಳಿಸಿದರು.
ಈ ವೇಳೆ ಸಂಘದ ವೆಂಕಟೇಶುಲು, ರಾಮುಡು, ನರಸಿಂಹಲು, ನಾಗೇಶ್, ಫೆÇೀತಪ್ಪ ಸೇರಿ ಹಲವರು ಇದ್ದರು.