ಸಿರುಗುಪ್ಪ, 29 ಜನವರಿ(ಹಿ.ಸ):
ಆ್ಯಂಕರ್: ಎರೆಡು ಮಕ್ಕಳ ತಂದೆ ಕುಡಿದ ಅಮಲಿನಲ್ಲಿ ನಾಲಿಕೆಯನ್ನು ಕತ್ತರಿಸಿಕೊಂಡು, ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ ಘಟನೆ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ವಿವಾಹಿತ ವೀರೇಶ ತಾನು ಆರಾಧಿಸುತ್ತಿದ್ದ ಕುಡತಿನಿ - ಅಲ್ಲೀಪುರ ಗ್ರಾಮದ ಹೊರಭಾಗದಲ್ಲಿ ನೆಲಯೂರಿರುವ ಶಂಕರಪ್ಪ ತಾತನ ಹೆಸರಿನಲ್ಲಿ ಕುಡಿದ ಮತ್ತಿನಲ್ಲಿ ತನ್ನ ನಾಲಿಗೆಯನ್ನು ಭಾನುವಾರ ಕತ್ತರಿಸಿಕೊಂಡಿದ್ದಾನೆ.
ವೀರೇಶನ ಆಪ್ತರು ತುಂಡಾದ ನಾಲಿಗೆಯನ್ನು ಪ್ಲಾಸ್ಟಿಕ್ ಕವರ್ನಲ್ಲಿ ತೆಗೆದುಕೊಂಡು, ದ್ವಿಚಕ್ರ ವಾಹನದಲ್ಲಿ ಕರೆತಂದು ವಿಮ್ಸ್ ಆಸ್ಪತ್ರೆಯನ್ನು ಸೇರಿಸಿದ್ದಾರೆ.
ಆದರೆ, ವೈದ್ಯರು, ತುಂಡಾದ ನಾಲಿಗೆಯನ್ನು ಜೋಡಿಸಲು ಸಾಧ್ಯವಿಲ್ಲ ಎಂದು ಪ್ರಥಮ ಚಿಕಿತ್ಸೆ ನೀಡಿಸಂಜೆಯೇ ಮನೆಗೆ ಕಳುಹಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿ ಗ್ರಾಮದ ವೀರೇಶ (26) ಹಮಾಲಿ ಕೆಲಸಗಾರ.
ಪೋಷಕರು ದೋಬಿಗಳು.
ಕೆಲ ವರ್ಷಗಳಿಂದ ವೀರೇಶ ಮಾನಸಿಕ ಅಸ್ವಸ್ತ. ಈತನ ಪೋಷಕರು ವೀರೇಶನ ಮಾನಸಿಕ ಚಿಕಿತ್ಸೆಗಾಗಿ
ಭೂತಪ್ರೇತಗಳನ್ನು ಬಿಡಿಸುವ ಖ್ಯಾತಿ ಪಡೆದಿರುವ ಲಿಂಗೈಕ್ಯ ಶಂಕರಪ್ಪ ತಾತನವರ ಮಠದ ಸಮಾಧಿಗೆ ಕರೆದುಕೊಂಡು ಬಂದು, ಚಿಕಿತ್ಸೆ ಕೊಡಿಸುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ.
ದೇವರು ಮತ್ತು ದೈವದ ಗುಂಗಿನಲ್ಲಿದ್ದ ವೀರೇಶನು ಭಾನುವಾರ ಕುಡಿದು ಗ್ರಾಮದ ಹೊರವಲಯದ ಗುಡ್ಡದಲ್ಲಿ ಇರುವ ದಂಡೆ ಮಹಾಂಕಾಳಿ ಗುಡಿಯ ಹತ್ತಿರ, ದೇವಸ್ಥಾನದ ಹೊರಗಡೆ ಇದ್ದ ಚಾಕುವಿನಿಂದ ನಾಲಿಗೆಯನ್ನು ಕತ್ತರಿಕೊಂಡಿದ್ದಾನೆ.
ವೀರೇಶ ನಾಲಿಗೆ ಕತ್ತರಿಕೊಂಡಿದ್ದನ್ನು ಗಮನಿಸಿದ ಸಾರ್ವಜನಿಕರು ತುಂಡಾದ ನಾಲಿಗೆಯನ್ನು ಪ್ಲಾಸ್ಟಿಕ್ ಕವರ್ನಲ್ಲಿ ಸಂಗ್ರಹ ಮಾಡಿಕೊಂಡು ವಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಮನೆಗೆ ವಾಪಸ್ಸು ಕಳುಹಿಸಿದ್ದಾರೆ ಎಂದು ಪೊಲಿಸರು ತಿಳಿಸಿದ್ದಾರೆ.
ಘಟನೆಯ ನಂತರ, ವೀರೇಶನು, ದೇವರನ್ನು ಒಲಿಸಿಕೊಳ್ಳಲಿಕ್ಕಾಗಿ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾನೆ ಎಂದು ಆತನ ಆಪ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವೀರೇಶನ ತಂದೆ ರಂಗಪ್ಪ (55) ತಾಯಿ ಲಕ್ಷ್ಮಿದೇವಿ (48), ಕಳೆದ ಎರೆಡು ವರ್ಷಗಳಿಂದ ದೇವಸ್ಥಾನಗಳಿಗೆ ವೀರೇಶ ಸುತ್ತುತ್ತಲೇ ಇದ್ದ. ಎಂಟು ವರ್ಷದ ಹಿಂದೆ ವಿವಾಹವಾಗಿದ್ದು, ಒಬ್ಬ ಮಗ, ಒಬ್ಬ ಮಗಳಿದ್ದಾಳೆ. ವೀರೇಶನ ವರ್ತನೆಯಿಂದ ಸಾಕಾಷ್ಟು ರೋಸಿಹೋಗಿದ್ದೇವೆ. ನಮಗೂ ಸಾಕಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತೆಕ್ಕಲಕೋಟೆ ಪೊಲೀಸ್ ಠಾಣೆಯ ಪೊಲೀಸರು ಮಾಹಿತಿ ಸಂಗ್ರಹ ಮಾಡಿದ್ದು, ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಲು ಚಿಂತನೆ ನಡೆಸಿದ್ದಾರೆ.
ದ್ವಿಚಕ್ರ ವಾಹನದಲ್ಲಿ ವಿಮ್ಸ್ ಆಸ್ಪತ್ರೆ ಸೇರಸಿದ್ದ ದೇವಣ್ಣ (40), `ಉಪ್ಪಾರಹೊಸಹಳ್ಳಿಯಿಂದ ಬಳ್ಳಾರಿಗೆ ಗಾಯಾಳು
ಮತ್ತು ಆತನ ತಂದೆಯನ್ನು ಗಾಡಿಯಲ್ಲಿ ಕೂಡಿಸಿಕೊಂಡು ವಿಮ್ಸ್ ಆಸ್ಪತ್ರೆಗೆ ಸೇರಿಸಿದ್ದೆ. ವೈದ್ಯರು ಚಿಕಿತ್ಸೆ ನೀಡಲು ಬರುವುದಿಲ್ಲ ಎಂದು ಹೇಳಿದ ಕಾರಣ, ಮನೆಗೆ ಕರೆದುಕೊಂಡು ಹೋಗುತ್ತಿರುವೆ' ಎಂದು ತಿಳಿಸಿದ್ದಾರೆ.