ವಿಶ್ವಸಂಸ್ಥೆಯ ಅಧಿವೇಶನ ಆರಂಭ
ನ್ಯೂಯಾರ್ಕ್, 20 ಸೆಪ್ಟೆಂಬರ್ (ಹಿ.ಸ): ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಈ ಬಾರಿಯ ಅಧಿವೇಶ
ವಿಶ್ವಸಂಸ್ಥೆಯ ಅಧಿವೇಶನ ಆರಂಭ


ನ್ಯೂಯಾರ್ಕ್, 20 ಸೆಪ್ಟೆಂಬರ್ (ಹಿ.ಸ):

ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಈ ಬಾರಿಯ ಅಧಿವೇಶನದಲ್ಲಿ ಭಾಗವಹಿಸಲು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ನ್ಯೂಯಾರ್ಕ್ಗೆ ತಲುಪಿದ್ದಾರೆ.

ಸೆಪ್ಟೆಂಬರ್ ೨೪ರಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ರುಚಿರಾ ಕಂಬೋಜ್ ಅವರು ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಈಗಾಗಲೇ ನ್ಯೂಯಾರ್ಕ್ಗೆ ಆಗಮಿಸಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸೆಪ್ಟೆಂಬರ್ ೨೮ರವರೆಗೆ ಅಮೆರಿಕದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ವಾಷಿಂಗ್ಟನ್ಗೆ ಭೇಟಿ ನೀಡಲಿದ್ದಾರೆ. ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟಾರೆಸ್ ಅವರೊಂದಿಗೂ ಸಚಿವ ಎಸ್. ಜೈಶಂಕರ್ ಮಾತುಕತೆ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

೭೭ಬೇ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾಗಿಯಾಗುವುದು ಅಲ್ಲದೇ, ಇನ್ನೂ ಹಲವಾರು ಕಾರ್ಯಕ್ರಮಗಳಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪಾಲ್ಗೊಳ್ಳಲಿದ್ದಾರೆ.

ಅವರು ಇಂದು ಅಲ್ಬೇನಿಯಾ, ಮಾಲ್ಡಾ, ಇಂಡೋನೇಷ್ಯಾದ ವಿದೇಶಾಂಗ ಸಚಿವರ ಜತೆ ಮಾತುಕತೆ ನಡೆಯಲಿದೆ.

ವಿವಿಧ ರಾಷ್ಟ್ರಗಳ ಜತೆಗಿನ ದ್ವಿಪೀಕ್ಷಿಯ ಬಾಂಧವ್ಯ ಚರ್ಚೆ, ವಿವಿಧ ದೇಶಗಳ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ.

ಇದಲ್ಲದೇ ಪ್ರಮುಖವಾಗಿ ಭಾರತ, ಫ್ರಾನ್ಸ್ ಮತ್ತು ಯುಎಇ ನಡುವಿನ ತ್ರಿಪಕ್ಷೀಯ ಸಹಕಾರ ಸಂಬಂಧ ಮಾತುಕತೆಯಯನ್ನೂ ವಿದೇಶಾಂಗ ಸಚಿವರು ನಡೆಸಲಿದ್ದಾರೆ.

ಭಯೋತ್ಪಾದನೆ ನಿಗ್ರಹ, ಶಾಂತಿ ಸ್ಥಾಪನೆ, ಜಾಗತಿಕ ತಾಪಮಾನ ತಡೆ, ವಿಶ್ವದಾದ್ಯಂತ ಕೋವಿಡ್ ಲಸಿಕೆ ಪೂರೈಕೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಇದರಲ್ಲಿ ಭಾರತೀಯ ಪ್ರತಿನಿಧಿಗಳು ತಮ್ಮ ಪ್ರಸ್ತಾವಗಳನ್ನು ಮಂಡಿಸಲಿದ್ದಾರೆ ಎಂದು ರುಚಿರಾ ಕಂಬೋಜ್ ವಿವರಿಸಿದ್ದಾರೆ.

ಸನ್ಮಾನ, ಸಂವಾದ, ಸಹಯೋಗ, ಶಾಂತಿ, ಸಮದ್ಧಿ ವಿಷಯಗಳು ಪ್ರಮುಖವಾಗಿ ಪ್ರಸ್ತಾಪ ಮಾಡಲಾಗುವುದು ಎಂದು ಭಾರತದ ಶಾಶ್ವತ ಮಿಷನ್ ಟ್ವೀಟ್ನಲ್ಲಿ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande