ಬೆಂಗಳೂರು, 27 ಅಕ್ಟೋಬರ್ (ಹಿ.ಸ):
ಆ್ಯಂಕರ್ : ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ಏರಿಕೆಯಾಗಿದ್ದು ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಿದೆ.
ರಾಜ್ಯದಲ್ಲಿ ಇಂದು ಹೊಸದಾಗಿ 282 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 13 ಮಂದಿ ಸಾವನ್ನಪ್ಪಿದ್ದಾರೆ.ಜೊತೆಗೆ 349 ಮಂದಿ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ
ರಾಜ್ಯದಲ್ಲಿ ಇಂದು ಬಾಗಲಕೋಟೆ, ಬೀದರ್, ಚಾಮರಾಜನಗರ, ಗದಗ, ಹಾವೇರಿ,ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಸೋಂಕು ಪ್ರಕರಣ ದೃಢಪಟ್ಟಿಲ್ಲ.
ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ 29,86, 835 ಕ್ಕೆ ಏರಿಕೆಯಾಗಿದೆ.ಇಲ್ಲಿಯ ತನಕ 29,40,339 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 38,037 ಕ್ಕೆ ಏರಿಕೆ.
ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 8,430 ಕ್ಕೆ ಕುಸಿದಿದೆ.
ಸೋಂಕಿನಿಂದ ಸಾವನ್ನಪ್ಪಿದವ ಪ್ರತಿಶತ ಪ್ರನಾಣ ಶೇ.4.60 ಕ್ಕೆ ಇಳಿಕೆಯಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರತಿಶತ 0.24 ರಷ್ಟು ಇದೆ.
ಬೆಂಗಳೂರಿನಲ್ಲಿ ಇಳಿಕೆ
ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಕರಣ ಇಂದು ಇಳಿಕೆಯಾಗಿದೆ .142 ಮಂದಿಗೆ ಕಾಣಿಸಿಕೊಂಡಿದ್ದು, 174 ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. 6 ಮಂದಿ ಸಾವನ್ನಪ್ಪಿದ್ದಾರೆ
1.17 ಲಕ್ಷ ಪರೀಕ್ಷೆ:
ರಾಜ್ಯದಲ್ಲಿ ಇಂದು 1,17,351 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು ಇಲ್ಲಿಯತನಕ ಒಟ್ಟಾರೆಯಾಗಿ 5,04,31,486 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇಂದಿನ ಪ್ರಕರಣ
ಜಿಲ್ಲೆ ಎಷ್ಟು
* ಬಾಗಲಕೋಟೆ- 0
* ಬಳ್ಳಾರಿ - 2
* ಬೆಳಗಾವಿ - 2
* ಬೆಂಗಳೂರು ಗ್ರಾಮಾಂತರ- 3
* ಬೆಂಗಳೂರು ನಗರ. - 142
* ಬೀದರ್ 0
* ಚಾಮರಾಜನಗರ- 0
* ಚಿಕ್ಕಬಳ್ಳಾಪುರ- 2
* ಚಿಕ್ಕಮಗಳೂರು- 4
* ಚಿತ್ರದುರ್ಗ- 3
* ದಕ್ಷಿಣ ಕನ್ನಡ - 28
* ದಾವಣಗೆರೆ- 1
* ಧಾರವಾಡ- 1
* ಗದಗ- 0
* ಹಾಸನ- 18
* ಹಾವೇರಿ- 0
* ಕಲಬುರಗಿ- 0
* ಕೊಡಗು- 31
* ಕೋಲಾರ- 1
* ಕೊಪ್ಪಳ- 0
* ಮಂಡ್ಯ- 5
* ಮೈಸೂರು- 18
* ರಾಯಚೂರು- 1
* ರಾಮನಗರ - 3
* ಶಿವಮೊಗ್ಗ- 2
* ತುಮಕೂರು- 9
* ಉಡುಪಿ- 2
* ಉತ್ತರ ಕನ್ನಡ- 2
* ವಿಜಯಪುರ - 0
* ಯಾದಗಿರಿ- 0
ಹಿಂದೂಸ್ತಾನ್ ಸಮಾಚಾರ್